Monday, June 9, 2025
Google search engine

Homeಅಪರಾಧಕ್ಷುಲ್ಲಕ ವಿಷಯಕ್ಕೆ 17 ವರ್ಷದ ಯುವಕ ಆತ್ಮಹತ್ಯೆ

ಕ್ಷುಲ್ಲಕ ವಿಷಯಕ್ಕೆ 17 ವರ್ಷದ ಯುವಕ ಆತ್ಮಹತ್ಯೆ

ಕೋಲಾರ ಜಿಲ್ಲೆಯ ರಾಷ್ರ್ಟೀಯ ಹೆದ್ದಾರಿಯಲ್ಲಿರುವ ಅಮ್ಮೇರಹಳ್ಳಿ ಕೆರೆಯಲ್ಲಿ ಹದಿನೇಳು ವರುಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ. ಈತನನ್ನು ಭರತ್ (17) ಎಂದು ಗುರುತಿಸಲಾಗಿದ್ದು, ಕೊಂಡರಾಜನಹಳ್ಳಿ ಗ್ರಾಮದ ರಾಜು ಹಾಗೂ ಸುಜಾತ ದಂಪತಿಗಳ ಪುತ್ರ ಎಂದು ತಿಳಿದು ಬಂದಿದೆ.

ತಮ್ಮ ಪುತ್ರ ಮೂರು ದಿನಗಳಿಂದ ಕಾಣೆಯಾಗಿದ್ದನೆಂದು ಆತನ ಪೋಷಕರು ಗ್ರಾಮಾಂತರ ಪೋಲೀಸು ಠಾಣೆಯಲ್ಲಿ ದೂರು ನೀಡಿದ್ದರು.  ಇಂದು ಶವವೊಂದು ಕೆರೆಯಲ್ಲಿ ತೇಲುತ್ತಿದೆ ಎಂದು ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣವೇ ಪೋಲೀಸರು ಸ್ಥಳಕ್ಕೆ ಆಗಮಿಸಿ ಭರತ್ ಶವವನ್ನು ಹೊರ ತೆಗೆದಿದ್ದಾರೆ. ಕಳೆದ  ಮೂರು ದಿನಗಳ ಹಿಂದೆ ಪೋಷಕರು ಸಣ್ಣ ವಿಚಾರವೊಂದಕ್ಕೆ  ಪೋಷಕರು ನಿಂದಿಸಿದರು ಎಂದು ಭರತ್‌ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ ಎಂದು ಪೋಲೀಸರು ಶಂಕೆ ತಿಳಿಸಿದ್ದಾರೆ. ಮೂರು ದಿನದ ಹಿಂದೆ ಭರತ್‌ ತನ್ನ ಸೈಕಲ್ ಹಾಗೂ ಬ್ಯಾಗ್ ತೆಗೆದುಕೊಂಡು ಮನೆಯಿಂದ ಹೊರಟಿದ್ದ. ಕೆರೆಯ ಬಳಿ ಸೈಕಲ್ ಹಾಗೂ ಬ್ಯಾಗ್ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

RELATED ARTICLES
- Advertisment -
Google search engine

Most Popular