ಹನೂರು : ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ೨,೨೮,೦೩,೮೦೩ರೂ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಏಣಿಕೆ ಕಾರ್ಯ ಮಾಡಲಾಯಿತು.
೩೨ ದಿನಗಳ ಅವಧಿಯಲ್ಲಿ ಮೊತ್ತ ರೂ, ೨,೨೮,೦೩,೮೦೩ನಗದು, ಮತ್ತು ೫೯ ಗ್ರಾಂ ಚಿನ್ನ, ೧ ಕೆ.ಜಿ. ೫೦೦ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
೬ ವಿದೇಶಿ ಕರೆನ್ಸಿ ಲಭ್ಯ : ಅರಬ್ ೧, ಥೈಲ್ಯಾಂಡ್ ೧, ಯುರೋಪ್ ೧ ಹಾಗೂ ಶ್ರೀಲಂಕಾ ೧ ಮತ್ತು ಚಲಾವಣೆಯಲ್ಲಿ ಇಲ್ಲದ ೨೦೦೦ ರೂ ಮುಖಬೆಲೆಯ ೨೧ನೋಟುಗಳು ದೊರೆತಿದೆ.
ಅಮಾವಾಸ್ಯೆ, ಹುಣ್ಣಿಮೆ, ರಜಾ ದಿನಗಳು ಸೇರಿದಂತೆ ಮಲೆ ಮಾದೇಶ್ವರನ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡಿದ್ದರು.
ಇದೇ ಸಂದರ್ಭದಲ್ಲಿ ಮಲೆ ಮಾದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಹಣಕಾಸು ಲೆಕ್ಕಪತ್ರ ಸಹಾಯಕರಾದ ನಾಗೇಶ್, ಚಾಮರಾಜನಗರ ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆಯ ಮಧುಶ್ರೀ, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಸಿಬ್ಬಂದಿಗಳು, ಪ್ರಾಧಿಕಾರದ ಸಿಬ್ಬಂದಿಗಳು ಹಾಜರಿದ್ದರು.