Friday, April 18, 2025
Google search engine

Homeಅಪರಾಧನೇಪಾಳ ನದಿಯಲ್ಲಿ ಕೊಚ್ಚಿ ಹೋದ ೨ ಬಸ್ : ೫೦ ಮಂದಿ ನಾಪತ್ತೆ

ನೇಪಾಳ ನದಿಯಲ್ಲಿ ಕೊಚ್ಚಿ ಹೋದ ೨ ಬಸ್ : ೫೦ ಮಂದಿ ನಾಪತ್ತೆ

ನೇಪಾಳ: ನೇಪಾಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಪ್ರಯಾಣಿಕರ ಬಸ್ಸುಗಳು ಕೊಚ್ಚಿಹೋದ ನಂತರ ನೇಪಾಳದ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ೫೦ಕ್ಕೂ ಹೆಚ್ಚು ಜನರಿಗಾಗಿ ಶನಿವಾರ ಶೋಧವನ್ನ ಪ್ರಾರಂಭಿಸಲಾಯಿತು. ಇವರಲ್ಲಿ ೭ ಮಂದಿ ಭಾರತೀಯರು ಸೇರಿದ್ದಾರೆ. ಆದ್ರೆ, ಇದ್ರಲ್ಲಿ ಒರ್ವ ಭಾರತೀಯನ ಶವವನ್ನ ವಶಪಡಿಸಿಕೊಳ್ಳಲಾಗಿದೆ. ಚಿಟ್ವಾನ್ ಜಿಲ್ಲೆಯ ನಾರಾಯಣ್ ಘಾಟ್-ಮಗ್ಲಿಂಗ್ ರಸ್ತೆಯ ಸಿಮಾಲ್ಟಾಲ್ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಎರಡು ಬಸ್ಸುಗಳು ತ್ರಿಶೂಲಿ ನದಿಯಲ್ಲಿ ಕೊಚ್ಚಿಹೋಗಿವೆ. ಸುಮಾರು ೫೦೦ ಭದ್ರತಾ ಸಿಬ್ಬಂದಿ ೫೦ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಭಾರೀ ಮಳೆಯಿಂದಾಗಿ ನೇಪಾಳದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ಎರಡು ಬಸ್ಸುಗಳು ನದಿಯಲ್ಲಿ ಕೊಚ್ಚಿಹೋಗಿವೆ. ಬಿರ್ಗುಂಜ್ನಿಂದ ಕಠ್ಮಂಡುವಿಗೆ ಏಳು ಭಾರತೀಯರು ಸೇರಿದಂತೆ ೨೪ ಜನರನ್ನು ಹೊತ್ತ ಬಸ್ ಮತ್ತು ಕಠ್ಮಂಡುದಿಂದ ಗೌರ್ಗೆ ತೆರಳುತ್ತಿದ್ದ ಮತ್ತೊಂದು ಬಸ್ನಲ್ಲಿ ೩೦ ಸ್ಥಳೀಯರು ಇದ್ದರು. ಬಸ್ಸಿನಲ್ಲಿದ್ದ ಮೂವರು ಸುರಕ್ಷಿತವಾಗಿ ಈಜಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ನೇಪಾಳ ಪೊಲೀಸರ ಪ್ರಕಾರ, ಸುಮಾರು ೫೧ ಜನರು ಇನ್ನೂ ಕಾಣೆಯಾಗಿದ್ದಾರೆ. ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೇಪಾಳ ಭದ್ರತಾ ಪಡೆಗಳ ಡೈವರ್‌ಗಳ ಸಹಾಯದಿಂದ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನ ಪ್ರಾರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಲು ನೇಪಾಳ ಸೇನೆ, ನೇಪಾಳ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯೊಂದಿಗೆ ಡೈವರ್?ಗಳನ್ನ ಸಹ ನಿಯೋಜಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ೫೦೦ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ನೇಪಾಳದಲ್ಲಿ ರಕ್ಷಣಾ ಸಿಬ್ಬಂದಿ ಶನಿವಾರ ೪೦ ವರ್ಷದ ಭಾರತೀಯ ಪ್ರಜೆಯ ಶವವನ್ನ ವಶಪಡಿಸಿಕೊಂಡಿದ್ದಾರೆ. ಅಪಘಾತದ ಸ್ಥಳದಿಂದ ೫೦ ಕಿ.ಮೀ ದೂರದಲ್ಲಿ ಮೊದಲ ಶವವನ್ನ ವಶಪಡಿಸಿಕೊಳ್ಳಲಾಗಿದೆ. ಮೃತನನ್ನ ಭಾರತದ ರಿಷಿ ಪಾಲ್ ಶಾಹಿ ಎಂದು ಗುರುತಿಸಲಾಗಿದೆ. ಚಿತ್ವಾನ್ ಜಿಲ್ಲೆಯ ನಾರಾಯಣಿ ನದಿಯಲ್ಲಿ ಅರ್ಧ ಮುಚ್ಚಿದ ಮತ್ತು ಭಾರತೀಯ ಗುರುತಿನ ಚೀಟಿಯನ್ನ ಹೊಂದಿದ್ದ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular