ಧಾರವಾಡ : ಜಿಲ್ಲೆಯಲ್ಲಿ ಮೂರನೇ ಸುತ್ತಿನ ಇಂದ್ರಧನುಷ್ ಲಸಿಕಾ ಅಭಿಯಾನವು ಅ. 09 ರಿಂದ 14 ರವರೆಗೆ ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳು, ಗರ್ಭಿಣಿಯರಿಗೆ ಲಸಿಕೆ ಹಾಕಲಾಗುವುದು. ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ. ಕೆ.ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು (ಏ. 06) ಬೆಳಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೀವ್ರತೆಯ ಇಂದ್ರಧನುಷ್ 5.0 ಅಭಿಯಾನದಲ್ಲಿ ವಂಚಿತ ಮತ್ತು ಬಾಕಿ ಇರುವ ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ಅವರು ಹೇಳಿದರು.
ಈ ಮಹತ್ವದ ಆರೋಗ್ಯ ಕಾರ್ಯಕ್ರಮ ಅರ್ಹರೆಲ್ಲರಿಗೂ ತಲುಪಬೇಕು. ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ಮಕ್ಕಳಿಗೆ ಈ ವಿಶೇಷ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಪೋಷಕರಿಗೆ ಮನವರಿಕೆ ಮಾಡಿ, ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ. ಜಿಲ್ಲೆಯಲ್ಲಿ ಶೇ. 100 ಲಸಿಕೆಗಳು ಪ್ರಗತಿಯಾಗಬೇಕು ಎಂದು ಮಾಹಿತಿ ನೀಡಿದರು. ಶಾಲಾ ಹಂತದಲ್ಲಿಯೇ ಲಸಿಕೆ ಹಾಕಿದ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕಿ, ಶಿಕ್ಷಕರು, ಶಾಲಾ ಮುಖ್ಯಸ್ಥರು ಶ್ರಮವಹಿಸಿ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಲ್ಲಿ ಪೋಷಕರ ವಿಶ್ವಾಸ ಮೂಡಿಸಬೇಕು ಎಂದರು. ಇಂದ್ರಧನುï ಕಾರ್ಯಕ್ರಮದಲ್ಲಿ ಧನು ರಾಶಿ, ದಾದಾ, ನಾಯಿ ಕೆಮ್ಮು, ಕಮಲೆ ಮತ್ತು ಪೆಲಿಯೋ ರೋಗಗಳ ವಿರುದ್ಧ ಲಸಿಕೆ ಹಾಕಲಾಗುತ್ತದೆ.
ಇಂದ್ರಧನುಷ್ ಲಸಿಕಾ ಸ್ಥಳಗಳು: ಧಾರವಾಡ 174, ಧಾರವಾಡ ನಗರ 197, ಹುಬ್ಬಳ್ಳಿ 75, ಹುಬ್ಬಳ್ಳಿ ನಗರ 219, ಕಲಘಟಗಿ 107, ಕುಂದಗೋಳ 84 ಮತ್ತು ನವಲಗುಂದ 64 ಸೇರಿದಂತೆ ಜಿಲ್ಲೆಗಳಲ್ಲಿ ಒಟ್ಟು 920 ಲಸಿಕಾ ಸ್ಥಳಗಳನ್ನು ಗುರುತಿಸಿ ಪರಿಣಾಮಕಾರಿ ಇಂದ್ರಾ ಲಸಿಕಾ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಶಾಲೆಗಳು, ಜನಸಂದಣಿ, ಗ್ರಾಮಗಳ ಓಣಿಗಳಿಗೆ ಭೇಟಿ ನೀಡಿ, ಲಸಿಕೆ ಹಾಕದ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇಂದ್ರಧನುಷ್ ಲಸಿಕ ವೈದ್ಯರು, ಸಿಬ್ಬಂದಿ, ತಂಡಗಳು: ಲಸಿಕಾ ಅಭಿಯಾನದಲ್ಲಿ ಸುಮಾರು 256 ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ವಿವಿಧ ಹಂತದ 512 ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಿ.ಎಚ್.ಓ ಡಾ.ಸುಜಾತಾ ಹಾಸವಿಮಠ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಎನ್.ಗಬ್ಬಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ ಸಿ., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ.ಡಾ.ವಿವಿಧ ಯೋಜನಾ ಅರ್ಜಿ ಅಧಿಕಾರಿಗಳಿಂದ ಡಾ. ಆರೋಗ್ಯ ಇಲಾಖೆ ಮಂಜುನಾಥ ಸೊಪ್ಪಿಮುತ್ತು, ಡಾ.ಅಯ್ಯನಗೌಡ ಪಾಟೀಲ, ಡಾ.ಮಹೇಶ ಚಿತ್ತರಗಿ, ತಾಲೂಕು ವೈದ್ಯಾಧಿಕಾರಿ ಡಾ.ತನುಜಾ. ಕೆ.ಎನ್., ಡಾ.ವಿದ್ಯಾವತಿ ಪಾಟೀಲ, ಡಾ.ಆರ್.ಬಿ.ಬೋವೇರ, ಡಾ.ಕರ್ಲವಾಡ, ಡಾ.ವಿಜಯಲಕ್ಷ್ಮಿ ಸೊಪ್ಪನವರ, ಸಿಡಿಪಿಒ ದೀಪಾ ಜಾವೂರ, ವಿಜಯಲಕ್ಷ್ಮಿ ಪಾಟೀಲ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ. ಸುಭಾಸ ಬಬ್ರುವಾಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. .