Saturday, June 28, 2025
Google search engine

Homeರಾಜ್ಯಸುದ್ದಿಜಾಲನಾಡಪ್ರಭು ಕೆಂಪೇಗೌಡ ರ 516 ನೇ ವರ್ಷದ ಜಯಂತೋತ್ಸವ

ನಾಡಪ್ರಭು ಕೆಂಪೇಗೌಡ ರ 516 ನೇ ವರ್ಷದ ಜಯಂತೋತ್ಸವ

ವರದಿ: ಎಡತೊರೆ ಮಹೇಶ್

ಹೆಚ್. ಡಿ ಕೋಟೆ : ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹೆಚ್. ಡಿ ಕೋಟೆ ಮತ್ತು ತಾಲೂಕು ಒಕ್ಕಲಿಗರ ಸಂಘ ಹೆಚ್ ಡಿ ಕೋಟೆ ಇವರ ಸಹಯೋಗದೊಂದಿಗೆ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ರವರ ಜನ್ಮದಿನೊತ್ಸವ ಕಾರ್ಯಕ್ರಮವನ್ನು ತಾಲೂಕಿನ ಶಾಸಕರು ಮತ್ತು ಅರಣ್ಯ ವಸತಿ ಮತ್ತು ವಿಹಾರದಾಮಗಳ ಅಧ್ಯಕ್ಷ ರಾದ ಅನಿಲ್ ಚಿಕ್ಕಮಾದು ರವರು ಮತ್ತು ವೇದಿಕೆ ಗಣ್ಯರು ದೀಪ ಬೆಳಗಿಸಿದರು.

ಕಾರ್ಯಕ್ರಮದ ಪ್ರಸಾವಿಕ ನುಡಿಯನ್ನು ನುಡಿದ ತಹಶೀಲ್ದಾರ್ ಶ್ರೀನಿವಾಸ್ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಮಹನೀಯರ ಜಯಂತಿಯನ್ನು ಮಾಡಿ ಅವರು ಈ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ತಿಳಿಸುವುದು ಇಲಾಖೆಯ ಆಧ್ಯ ಕರ್ತವ್ಯ, ಕೆಂಪೇಗೌಡ ರವರು ಬೆಂಗಳೂರಿನ ಆದುನಿಕ ನಿರ್ಮಾತೃ, ಕೆರೆ ಕಟ್ಟೆಗಳು, ಪೇಟೆಗಳನ್ನು ನಿರ್ಮಾಣ ಮಾಡಿದರು, ಸರ್ವ ಧರ್ಮಗಳ ಅಭಿವೃದ್ಧಿಗೆ ಹೋರಾಡಿ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಿದರು ಇವರ ಕೊಡುಗೆಗಳನ್ನು ಸ್ಮರಿಸಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕಿರಣ್ ಶಿಡ್ಲೆಹಳ್ಳಿ ಕೆಂಪೇಗೌಡರ ಇತಿಹಾಸ ತಿಳಿಯಲು ಮೊದಲು ವಿಜಯ ನಗರ ಸಾಮ್ರಾಜ್ಯವನ್ನು ತಿಳಿಯಬೇಕು, ಇವರ ವಿಚಾರ ಇವತ್ತಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯ ಮತ್ತು ಅಗತ್ಯವೂ ಕೂಡ, ನಮ್ಮ ದೇಶದಲ್ಲಿ ಯುದ್ಧಗಳು ನಡೆಯುತ್ತಿದ್ದದ್ದು ಸ್ವಾಭಿಮಾನಕೊಸ್ಕರ ಅಂತಹ ನಾಡು ನಮ್ಮದು, ಬೆಂಗಳೂರಿನ ನಿರ್ಮಾಣ ದಲ್ಲಿ 5 ಅಂಶಗಳನ್ನು ಸೇರಿಸಿಕೊಂಡು ಕೋಟೆ, ಪೇಟೆ, ಉಧ್ಯಾನ, ಗುಡಿ, ಕೆರೆ,ಇವುಗಳ ಅಭಿವೃದ್ಧಿ ಗೆ ಹೆಚ್ಚಿನ ಹೊತ್ತನ್ನು ನೀಡಿದರು, ಬೆಂಗಳೂರಿನಲ್ಲಿ 65 ಸಮುದಾಯಗಳನ್ನು ಗುರುತಿಸಿ ಬದುಕು ಕಟ್ಟು ಕೊಡುವ ಗುಡಿ ಕೈಗಾರಿಕೆಗಳನ್ನು ನಿರ್ಮಿಸಿದರು ಗೋಪುರ, ರಸ್ತೆ, ಎಲ್ಲವು ಸೇರಿತು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ರವರು ಗ್ರಾಮೀಣ ಪ್ರದೇಶದ ಯುವಕರು ಇಂದಿಗೂ ಉದ್ಯೋಗವನ್ನು ಹರಸಿ ಬೆಂಗಳೂರಿಗೆ ಬಂದು ನೆಲೆಸಿ ಜೀವನ ಕಟ್ಟಿಕೊಂಡಿದ್ದಾರೆ, ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕೇಂದ್ರ ಬೆಂಗಳೂರು, ಐಟಿ, ಬಿಟಿ ಯಲ್ಲೂ ಬೆಂಗಳೂರು ಮುಂಚೂಣಿಯಲ್ಲಿ ಇದೆ, ಪ್ರಕೃತಿ ಗೆ ಪೂರಕವಾಗಿ ಬೆಂಗಳೂರಿನ ನಿರ್ಮಾಣದಲ್ಲಿ ಯಶಸ್ವಿ ಯಾದರು ಕೆಂಪೇಗೌಡರು, ಇವರ ಹೆಸರು ಅಜರಾಮರ, ಇಂದಿಗೂ ಏರ್ ಪೋರ್ಟ್ಗೆ ಅವರ ಹೆಸರು ಇಟ್ಟಿರುವುದು ಹೆಮ್ಮೆಯ ವಿಚಾರ ಎಂದರು.

ಕೋಟೆ ತಾಲೂಕಿನಕೆಂಪೇಗೌಡರ ಸಮುದಾಯ ಭವನ ನಿರ್ಮಾಣಕ್ಕೆ ಸಂತೆ ಮಾಳದ ಹಿಂದೆ 32 ಗುಂಟೆ ಜಾಗವನ್ನು ಗುರುತಿಸಲಾಗಿದ್ದು, ಈ ಕಡತ ಜಿಲ್ಲಾಧಿಕಾರಿಗಳ ಬಳಿ ಇದೆ, ಇದನ್ನು ಆದಷ್ಟು ಬೇಗ ಸಮಾಜಕ್ಕೆ ನೀಡಿ ಸರ್ಕಾರದಿಂದ ಅನುದಾನ ತಂದು ಭವನ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದರು. ಯಾವುದೇ ಮಹನೀಯರ ಜಯಂತಿ ಮಾಡಬೇಕಾದರೂ ಪೂರ್ವ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮವನ್ನು ರೂಪಿಸಬೇಕು, ಅಧಿಕಾರಿಗಳು ಇದರ ಬಗ್ಗೆ ಹೆಚ್ಚು ಮಾನ್ಯತೆ ಕೊಡಿ ಎಂದು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.

ಈ ಜಯಂತಿ ಕಾರ್ಯಕ್ರಮದಲ್ಲಿ ಕಳೆದ ವರ್ಷ ಶುಂಠಿ ಕೆಲಸಕ್ಕೆ ಹೋಗುವಾಗ ಹುಣಸೂರಿನ ಬಳಿ ಅಪಘಾತವಾಗಿ ಮರಣ ಹೊಂದಿದ 4 ಕುಟುಂಬಗಳಿಗೆ ಮುಖ್ಯ ಮಂತ್ರಿಗಳ ನಿಧಿ ಯಿಂದ 5 ಲಕ್ಷದ ಚೆಕ್ಕನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸುರೇಂದ್ರ ಮುಖಂಡರಾದ ನರಸಿಂಹ ಗೌಡ, ಕೃಷ್ಣೆಗೌಡ ಹಿರಹಳ್ಳಿ ಸೋಮೇಶ್, ಹಿರೇಗೌಡ, ಆದಿ ಕರ್ನಾಟಕ ಮಹಾಸಭಾಧ್ಯಕ್ಷರಾದ ಶಿವರಾಜು, ಜೀವಿಕ ಬಸವರಾಜು, ನಾಗರಾಜು, ಡಾ. ಎಸ್ ಮರಿದೇವಯ್ಯ, ತಾಲೂಕು ಕಾರ್ಯವಾಹಕ ಅಧಿಕಾರಿ ಧರಣೇಶ್, ಪುರಸಭೆ ಮುಖ್ಯ ಅಧಿಕಾರಿ ಸುರೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್, ತಾಲೂಕಿನ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

RELATED ARTICLES
- Advertisment -
Google search engine

Most Popular