ಕೆ.ಆರ್ ನಗರ: ನಗರದ ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿಯಲ್ಲಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಕೆ.ಆರ್ ನಗರದ ಕೃಷ್ಣರಾಜನಗರ ಸಮೀಪದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ (ದರ್ಗ) ವೀಕ್ಷಿಸಲು ಬಂದಿದ್ದದ್ದಾಗ ಈ ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ ಈಜಲು ಹೋದ ಎಂಟು ಜನ
ಎಂಟು ಜನರಲ್ಲಿ ಆರು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಐಮನ್ (13)
ಅಫೀಫ (13) ,ಯಾಸಿನ್ (23), ನೇಹಾ (22), ಫಾತಿಮಾ (30) ಮತ್ತು 5 ವರ್ಷದ ಉಮೆರ್ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.ಇನ್ನೂ ಈ ಘಟನೆಯಲ್ಲಿ ಇನ್ನಿಬ್ಬರ ಸ್ಥಿತಿ ಗಂಬೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.



