ಧಾರವಾಡ : ಧಾರವಾಡ ಉಪವಿಭಾಗ ವ್ಯಾಪಿಯಲ್ಲಿ ಬರುವ 110/11 ಕೆ.ವಿ ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.23 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ.
ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಆಗಸ್ಟ್ 23 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಕೆಹೆಚ್ಬಿ, ಉದಯಗಿರಿ, ವನಸಿರಿ ನಗರ, ರಾಜಾಜಿನಗರ, ಸತ್ತೂರ್ ವಿಲೇಜ್, ಸತ್ತೂರ್, ಆಶ್ರಯ ಕಾಲೋನಿ, ಎನ್ಜಿಇಎಫ್, ಎಸ್ಡಿಎಂ ಮೆಡಿಕಲ್ ಕಾಲೇಜ್, ಎಸ್ಡಿಎಂ ಡೆಂಟಲ್ ಕಾಲೇಜ್, 2ನೇ ಕೆಹೆಚ್ಬಿ ಹಂತ, ಐಐಐಟಿ, ಕೆಐಏಡಿಬಿ ಇಂಡಸ್ಟ್ರಿಯಲ್ ಏರಿಯಾ ಸತ್ತೂರ, ರಾಶಿ ಫಾರ್ಮ್, ಎಐಆರ್, ನವಲೂರ ರೈಲ್ವೆ ಸ್ಟೇಷನ್, ಸಂಜೀವಿನಿ ಪಾರ್ಕ್, ಹುಬ್ಬಳ್ಳಿ-ಧಾರವಾಡ ಡ್ಯೂರೇಬಲ್ ಗೂಡ್ಸ್(ಏಕಸ), ಕೆಎಂಎಫ್ ರಾಯಪುರ, ಐಓಸಿಎಲ್ ರಾಯಪುರ, ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.