ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಸಂಬಳ ನೀಡದ ಹಿನ್ನೆಲೆ ನಗರದ ನಾಲ್ಕು ಇಂದಿರಾ ಕ್ಯಾಂಟೀನ್ ಬಂದ್ ಆಗಿವೆ.
ಮಹಾನಗರ ಪಾಲಿಕೆ ಆವರಣ, ಕ್ಯಾತಸಂದ್ರ, ಮಂಡಿಪೇಟೆ, ಶಿರಾ ಗೇಟ್ ನ ಕ್ಯಾಂಟೀನ್ ಮುಚ್ಚಿದ್ದು, ಉಪ್ಪಿಟ್ಟು, ಇಡ್ಲಿ ಚಟ್ನಿ ತಿಂಡಿ ತಯಾರು ಮಾಡಿಟ್ಟು, ಗ್ರಾಹಕರಿಗೆ ನೀಡದೇ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ತಿಂಡಿ ತಿನ್ನಲು ಬಂದ ಗ್ರಾಹಕರು ವಾಪಾಸ್ಸಾಗಿದ್ದಾರೆ.
ಕಳೆದ 8 ತಿಂಗಳಿಂದ ರಿವಾರ್ಡ್ಸ್ ಏಜೆನ್ಸಿ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಇದರಿಂದ ಆಕ್ರೋಶಗೊಂಡ 30 ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.