Saturday, April 19, 2025
Google search engine

Homeಅಪರಾಧಬಾಲರಾಜ್ ಕೊಲೆ ಪ್ರಕರಣ:ಕೊಲೆ ಆರೋಪಿ ತಾಯಿ ನೇಣಿಗೆ ಶರಣು, ಜೈಲಿನಲ್ಲೇ ತಂದೆಗೆ ಹೃದಯಾಘಾತ

ಬಾಲರಾಜ್ ಕೊಲೆ ಪ್ರಕರಣ:ಕೊಲೆ ಆರೋಪಿ ತಾಯಿ ನೇಣಿಗೆ ಶರಣು, ಜೈಲಿನಲ್ಲೇ ತಂದೆಗೆ ಹೃದಯಾಘಾತ

ಮೈಸೂರು: ಮಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಮನನೊಂದ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದ್ದು, ಈ ವಿಚಾರದಿಂದ ಮನನೊಂದಿದ್ದ ಆರೋಪಿಯ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ರಾತ್ರಿ ನಗರದ ವಿದ್ಯಾನಗರದ ೪ನೇ ಕ್ರಾಸ್‌ನ ನಿವಾಸಿ ಬಾಲರಾಜ್ ಎಂಬುವನನ್ನು ಕ್ಷುಲ್ಲಕ ಕಾರಣಕ್ಕಾಗಿ ೪ ಜನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಈ ಸಂಬoಧ ಸ್ನೇಹಿತರಾದ ತೇಜಸ್, ಸಂಜಯ್, ಕಿರಣ್ ಹಾಗೂ ಸಾಮ್ರಾಟ್ ಎಂಬ ಯುವಕರು ಆರೋಪಿಗಳು ಎಂದು ಪೊಲೀಸರು ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನೂ ಬಂಧಿಸಿದ್ದರು.
ತೇಜಸ್ ತಾಯಿ ಆತ್ಮಹತ್ಯೆ: ಸ್ನೇಹಿತ ಬಾಲರಾಜ್ ಕೊಲೆ ಪ್ರಕರಣದಲ್ಲಿ ನನ್ನ ಮಗ ತೇಜಸ್ ಭಾಗಿಯಾಗಿದ್ದಾನೆ ಎಂದು ಮನನೊಂದ ತಾಯಿ ಇಂದ್ರಾಣಿ (೩೫) ಜೊತೆ ಕೊಲೆಯಾದ ಬಾಲರಾಜ್ ತಾಯಿ ಮನೆಗೆ ಬಂದು ಗಲಾಟೆ ಮಾಡಿದ್ದರು. ಈ ವೇಳೆ, ಮಗನನ್ನು ಪೊಲೀಸರು ಜೈಲಿಗೆ ಕಳುಹಿಸುತ್ತಾರೆ ಎಂಬ ವಿಚಾರ ತಿಳಿದು ತಾಯಿ ಇಂದ್ರಾಣಿ ಸೋಮವಾರ ಸಂಜೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗ ತೇಜಸ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಹೆಂಡತಿ ಇಂದ್ರಾಣಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯ ತಿಳಿದ, ಅದೇ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ತೇಜಸ್ ತಂದೆ ಸಾಮ್ರಾಟ್ ಕಳೆದ ರಾತ್ರಿ ಜೈಲಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಇಬ್ಬರ ಮೃತ ದೇಹಗಳನ್ನು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಇಂದ್ರಾಣಿ ಪ್ರಕರಣದ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬoಧಿಸಿದoತೆ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular