ಮಂಗಳೂರು: ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕದ ಜಿಲ್ಲಾ ವತಿಯಿಂದ ಪೇಜಾವರ ಅಂಬೇಡ್ಕರ್ ಭವನ ದಲ್ಲಿ ಬಿಎಸ್ ಪಿ ಸಂಸ್ಥಾಪಕರಾದ ಕಾನ್ಸಿರಾಮ್ ರವರ 17 ನೇ ಪುಣ್ಯ ಸ್ಮರಣೆ ನಡೆಯಿತು.
ಜಿಲ್ಲಾಧ್ಯಕ್ಷರಾದ ದೇವಪ್ಪ ಬೋಧಿ ಅಧ್ಯಕ್ಷತೆಯನ್ನು ವಹಿಸಿದ್ದರು. ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ವಿ. ಪದ್ಮನಾಭ ಮತ್ತು ಬಿಎಸ್ ಪಿ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು, ಜಿಲ್ಲಾ ಸಂಯೋಜಕರಾದ ನಾರಾಯಣ ಬೋಧಿ, ಪದ್ಮನಾಭ ಪೇಜಾವರ, ವಿಠ್ಠಲ್ ಕುಂದರ್, ರಾಕೇಶ್ ಕುಂದರ್, ನಿತಿನ್ ಮುತ್ತೂರು, ಜನಾರ್ಧನ್ ಪೇಜಾವರ, ಉಪಸ್ಥಿತರಿದ್ದರು. ಸಂಗೀತ ಬೋದ್ ಕಾರ್ಯಕ್ರಮ ನಿರೂಪಿಸಿದರು.