Saturday, April 19, 2025
Google search engine

Homeಅಪರಾಧಬೀಳಗಿ: ಕಾಣೆಯಾಗಿದ್ದ ವಕೀಲ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಬೀಳಗಿ: ಕಾಣೆಯಾಗಿದ್ದ ವಕೀಲ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಬೀಳಗಿ: ಕಾಣೆಯಾಗಿದ್ದ ವಕೀಲರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ವಕೀಲ ಗಿರೀಶ್ ಕಾಡಣ್ಣವರ(38) ಎಂದು ಗುರುತಿಸಲಾಗಿದೆ.

ಅಪರಿಚಿತರು ಕಲ್ಲಿನಿಂದ‌‌‌ ತಲೆ ದೇಹ ಜಜ್ಜಿ‌ ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿಯ ಶವ ಕೊಳೆತ‌ ಸ್ಥಿತಿಯಲ್ಲಿ ಗ್ರಾಮದ ವಾರಿ ಮಲ್ಲಯ್ಯನ‌ ಗುಡಿ ಬೆಟ್ಟದ ಮೇಲೆ ಪತ್ತೆಯಾಗಿದ್ದು, ಈತ ಬೀಳಗಿ ತಾಲ್ಲೂಕು ನ್ಯಾಯಾಲಯದಲ್ಲಿ ವಕೀಲಿ ವೃತ್ತಿ‌ ಮಾಡುತ್ತಿದ್ದು, ಅಕ್ಟೋಬರ್ ೧೫ ರಿಂದ ಮನೆಯಿಂದ‌ ನಾಪತ್ತೆಯಾಗಿದ್ದರು.

ಘಟನೆಗೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ‌ಬೀಳಗಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular