Monday, April 21, 2025
Google search engine

Homeರಾಜ್ಯಸುದ್ದಿಜಾಲತಾಯಿ-ಮಗು ಆರೋಗ್ಯವಾಗಿರಲು ರಕ್ತಹೀನತೆ ತಡೆಗಟ್ಟಬೇಕು: ಡಾ.ರಾಜೇಶ್ ಸುರಗಿಹಳ್ಳಿ

ತಾಯಿ-ಮಗು ಆರೋಗ್ಯವಾಗಿರಲು ರಕ್ತಹೀನತೆ ತಡೆಗಟ್ಟಬೇಕು: ಡಾ.ರಾಜೇಶ್ ಸುರಗಿಹಳ್ಳಿ


ಶಿವಮೊಗ್ಗ: ತಾಯಿ-ಮಗು ಆರೋಗ್ಯವಾಗಿರಲು ರಕ್ತಹೀನತೆ ಹೋಗಲಾಡಿಸಬೇಕು. ಹಾಗಾಗಿ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಂದ ಆರೋಗ್ಯ ಕೇಂದ್ರಗಳವರೆಗೆ ಪ್ರತಿ ತಿಂಗಳು ಗರ್ಭಿಣಿಯ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಡಿಎಚ್ ಒ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದರು

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಡಿಎಚ್ ಒ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ರಕ್ತಹೀನತೆ ಮುಕ್ತ ಪೌಷ್ಟಿಕಾಂಶ ಕರ್ನಾಟಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯಿಯ ಸಾವಿಗೆ ಅನಿಮಿಯಾ ಮುಖ್ಯ ಕಾರಣ. ಹಾಗಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರು ಪ್ರತಿ ತಿಂಗಳು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಸೂಕ್ತ ಚಿಕಿತ್ಸೆ ಹಾಗೂ ರಕ್ತದಾನಕ್ಕೆ ವ್ಯವಸ್ಥೆ ಮಾಡಬೇಕು. ಎಲ್ಲಾ ಕಬ್ಬಿಣಾಂಶ, ಫೋಲಿಕ್ ಆಸಿಡ್ ಮಾತ್ರೆಗಳು ಮತ್ತು ಸೋಂಕು ನಿವಾರಕ ಮಾತ್ರ ಲಭ್ಯವಿರುತ್ತದೆ.

ದೇಶದಲ್ಲಿ ನಮ್ಮ ರಾಜ್ಯವು ರಕ್ತಹೀನತೆಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ರಾಜ್ಯವಾಗಿದೆ. ದೇಶದಲ್ಲಿ ಶೇ. ೫೬ರಿಂದ ೬೦ ಮಂದಿ ಅನಿಮಿಯಾದಿಂದ ಬಳಲುತ್ತಿದ್ದು, ಇದನ್ನು ತಡೆಯಲು ಸರಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ರಕ್ತಹೀನತೆ ತಡೆ ತರಬೇತಿ ಕುರಿತು ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ವೈದ್ಯರು/ಸಿಬ್ಬಂದಿಗೆ ಅವರ ಕೆಳಮಟ್ಟದಲ್ಲಿ ತರಬೇತಿ ನೀಡಬೇಕು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮವಾದ ಡಾ. ಗುಡುದಪ್ಪ ಕಸಬಿ, ಡಾ.ಶಾಮಾ, ಡಾ, ಕಿರಣ್, ಡಾ.ಮಲ್ಲಪ್ಪ, ಡಾ.ಹರ್ಷವರ್ಧನ್, ಟಿಎಚ್ ಒ ಡಾ.ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular