Monday, April 21, 2025
Google search engine

Homeರಾಜಕೀಯವೃಥಾ ಆರೋಪ ಎಚ್ ಡಿಕೆಗೆ ಶೋಭೆ ತರಲ್ಲ: ಜಮೀರ್ ಅಹಮದ್ ಖಾನ್

ವೃಥಾ ಆರೋಪ ಎಚ್ ಡಿಕೆಗೆ ಶೋಭೆ ತರಲ್ಲ: ಜಮೀರ್ ಅಹಮದ್ ಖಾನ್

ಬೆಂಗಳೂರು: ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ನಡೆದ ದೂರವಾಣಿ ಮಾತುಕತೆ ಯನ್ನು ವರ್ಗಾವಣೆಯದು ಎಂದು ಕಲ್ಪಿಸಿಕೊಂಡು ಎಚ್. ಡಿ. ಕುಮಾರ ಸ್ವಾಮಿ ಅವರು ಆರೋಪ ಮಾಡಿರುವುದು ಮಾಜಿ ಮುಖ್ಯಮಂತ್ರಿಯಾದ ಅವರಿಗೆ ಶೋಭೆ ತರದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಇದೊಂದು ಹಳೆಯ ಕ್ಲಿಪಿಂಗ್. ವರ್ಗಾವಣೆ ಸಂಬಂಧ ಯಾವುದೇ ಮಾತು ಆಡಿಲ್ಲ. ಶಾಲೆ ಗಳ ಅಭಿವೃದ್ಧಿ ಗೆ ಸೀಮಿತ ವಾಗಿ ಮಾತನಾಡಿದ್ದಾರೆ. ಆದರೂ ಅದನ್ನೇ ರಾಜಕೀಯವಾಗಿ ಬಳಸಿಕೊಂಡು ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ತಮ್ಮ ಮೇಲಿನ ವಿವಾದ ದ ಗಮನ ಬೇರೆಡೆ ಸೆಳೆಯಲು ಯತಿಂದ್ರ ವಿಚಾರ ಎಳೆದು ತಂದಿದ್ದಾರೆ ಎಂದು ದೂರಿದ್ದಾರೆ.

ರಾಜಕಾರಣದಲ್ಲಿ ಸತ್ಯಾಂಶ ಇದ್ದರೆ ದಾಖಲೆ ಸಮೇತ ಆರೋಪ ಮಾಡಲಿ ಅದು ಬಿಟ್ಟು ಹತಾಶಾರಾಗಿ ಕಥೆ ಕಟ್ಟಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದ್ದಾರೆ.

ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಯತೀಂದ್ರ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಮಾತನಾಡಬಾರದೇ ಎಂದು ಪ್ರೆಶ್ನೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular