ತುಮಕೂರು: ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.
ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ನಿಧನರಾದ ವೃದ್ಧೆ.

ಕಳೆದ ವರ್ಷ 2022 ರ ಅಕ್ಟೋಬರ್ ನಲ್ಲಿ ಭಾರತ ಜೋಡೋ ವೇಳೆ ಪುಟ್ ಪಾತ್ ವ್ಯಾಪಾರಿಯಾಗಿದ್ದ ಶಾರದಮ್ಮ ದಣಿದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದರು.
ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆ ಹೊರಟಿದ್ದ ರಾಹುಲ್ ಗಾಂಧಿ ಬಳಿ ಇಂದಿರಾಗಾಂಧಿಯನ್ನು ವೃದ್ದೆ ಶಾರದಮ್ಮ ಹೊಗಳಿದ್ದರು.
