Tuesday, April 22, 2025
Google search engine

Homeರಾಜಕೀಯಗುರುಭವನ ಲೋಕಾರ್ಪಣಾ ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ಮಾತನಾಡುತ್ತೇನೆ: ವಿ.ಸೋಮಣ್ಣ

ಗುರುಭವನ ಲೋಕಾರ್ಪಣಾ ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ಮಾತನಾಡುತ್ತೇನೆ: ವಿ.ಸೋಮಣ್ಣ

ತುಮಕೂರು: ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ನನಗೆ ಸಿಕ್ಕಿದೆ. ಈ ಸ್ಥಳದಲ್ಲಿ ಯಾವುದೇ ರಾಜಕೀಯ ವಿಚಾರ ಮಾತಾಡೋದಿಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪ ಮಾಡೋದು ಸರಿಯಲ್ಲ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.

ಶ್ರೀ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದದಿಂದ ಈ ಒಳ್ಳೆ ಕೆಲಸ ನಡೀತಿದೆ. ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಬರುತ್ತಾರೆ ಎಂದರು.

ಡಿ.6 ರ ನಂತರ ಕೆಲ ವಿಚಾರ ಹೇಳುತ್ತೇನೆ ಎಂದಿದ್ದೇನೆ. ಈ ಕಾರ್ಯಕ್ರಮ ಮುಗಿದ‌ ಬಳಿಕ ರಾಜಕೀಯ ಮಾತನಾಡುತ್ತೇನೆ. ರಾಜಕೀಯಕ್ಕೂ ಗುರುಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular