Saturday, April 19, 2025
Google search engine

Homeಅಪರಾಧಮಂಡ್ಯ: ಕಬ್ಬಿಣದ ರಾಡ್, ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಪತಿ

ಮಂಡ್ಯ: ಕಬ್ಬಿಣದ ರಾಡ್, ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಪತಿ

ಮಂಡ್ಯ: ಕೌಟುಂಬಿಕ ಕಲಹ, ಪತ್ನಿಯನ್ನೆ ಪತಿ ಕೊಲೆಗೈದಿರುವ ಘಟನೆ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಧುಶ್ರೀ(32), ಪತಿಯಿಂದಲೆ ಕೊಲೆಯಾದ ಪತ್ನಿ. ಮಹದೇವ್(38) ಕೊಲೆಗೈದ ಕಿರಾತಕ ಪತಿ.

ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ 8 ವರ್ಷ ಹಾಗೂ 6 ವರ್ಷದ ಇಬ್ಬರು ಪುತ್ರಿಯರಿದ್ದಾರೆ.

ಚಾಲಕನಾಗಿದ್ದ ಆರೋಪಿ ಮಹದೇವ್ ಹಾಗೂ ಮಧುಶ್ರೀ ನಡುವೆ ಮನಸ್ತಾಪದಿಂದ ಆಗಾಗ ಕಲಹವಾಗುತ್ತಿತ್ತು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿ ಮೇಲೆ  ಕಬ್ಬಿಣದ ರಾಡು, ಕಟ್ಟಿಗೆಯಿಂದ ಪತಿ ಹಲ್ಲೆ ಮಾಡಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದಿದೆ.  ರಕ್ತಸ್ರಾವದಿಂದ ಮಧುಶ್ರೀ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.

ಪತ್ನಿ ಕೊಲೆ ಮಾಡಿದ ಬಳಿಕ ಪತಿ ಮಹದೇವ್ ಕಿರುಗಾವಲು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular