Sunday, April 20, 2025
Google search engine

Homeಸ್ಥಳೀಯಬಾವಲಿ ಚೆಕ್ ಪೋಸ್ಟ್ ಗೆ ಡಿಸಿ ಡಾ.ರಾಜೇಂದ್ರ ಕೆ. ವಿ. ಭೇಟಿ: ಪರಿಶೀಲನೆ

ಬಾವಲಿ ಚೆಕ್ ಪೋಸ್ಟ್ ಗೆ ಡಿಸಿ ಡಾ.ರಾಜೇಂದ್ರ ಕೆ. ವಿ. ಭೇಟಿ: ಪರಿಶೀಲನೆ

ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ಕೇರಳದಲ್ಲಿ   ಕೋವಿಡ್ -19 ಪ್ರಕರಣಗಳು  ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಕೆ. ವಿ. ರವರು , ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ,ಆರೋಗ್ಯ ಸಿಬ್ಬಂದಿ ವರ್ಗದವರು ಮತ್ತು ತಂಡದವರು , ಕೇರಳ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿ, ಕರಪತ್ರ ನೀಡಿ ಕೋವಿಡ್ -19 ಬಗ್ಗೆ ಜಾಗ್ರತೆ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ  ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ರವರು  ಕೇರಳದಿಂದ ಬರುವಂತಹ ಜನರನ್ನು ಥರ್ಮಲ್ ಸ್ಕ್ಯಾನಿಂಗ್ ನಲ್ಲಿ  ತಪಾಸಣೆ ಮಾಡುತ್ತಿದ್ದೇವೆ ಮತ್ತು ಕರ ಪತ್ರ ನೀಡಿ ಆರೋಗ್ಯ ಶಿಕ್ಷಣ ನೀಡುತ್ತಿದ್ದೇವೆ ಎಂದು ತಿಳಿಸಿದಾಗ ಜಿಲ್ಲಾಧಿಕಾರಿಗಳು ಕಾರ್ಯ ವೈಖರಿಯನ್ನು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ರೀತಿ  ಕಟ್ಟು ನೆಟ್ಟಾಗಿ ತಪಾಸಣೆ ಮಾಡಿ ಜನರಿಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸ್ಥಳದಲ್ಲೇ ಸೂಚಿಸಿದರು.

ಈ ಸಂದರ್ಭದಲ್ಲಿ  ಹುಣಸೂರು  A.C    ಶ್ರೀಮತಿ ರುಚಿ ಬಿಂದಾಲ್, ಡಿವೈಎಸ್ಪಿ  ಗೋಪಾಲಕೃಷ್ಣ, ತಹಶೀಲ್ದಾರ್ ಶ್ರೀನಿವಾಸ್, ಆರೋಗ್ಯಇಲಾಖೆ ಸಿಬ್ಬಂದಿ ವರ್ಗದವರು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಪೊಲೀಸ್ ಸಿಬ್ಬಂದಿ ವರ್ಗದವರು ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular