ಮೈಸೂರು: ನಾಡಿನ ಹೆಮ್ಮೆಯ ವಾಸ್ತುಶಿಲ್ಪಿ ಜಕಣಚಾರಿಯವರು ನಮ್ಮ ಪೀಳಿಗೆಗೆ ಮಾತ್ರವಲ್ಲದೇ, ಸೂರ್ಯ ಚಂದ್ರ ಇರುವವರೆಗೂ ಅಮರ ಎಂದು ಶಾಸಕರಾದ ಕೆ. ಹರೀಶ್ ಗೌಡ ಅವರು ತಿಳಿಸಿದರು.
ಇಂದು ನಗರದ ಕಿರುರಂಗಮoದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ, ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್, ಕುವೆಂಪು, ಬಸವಣ್ಣ ಅವರ ಸಾಲಿಗೆ ಸೇರುವ ಜಕಣಚಾರಿಯವರು ವಾಸ್ತುಶಿಲ್ಪದಲ್ಲಿ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಹಾಗೂ ರಸ್ತೆಗೆ ಅವರ ಹೆಸರಿಡುವ ಮೂಲಕ ಅವರ ಬಗ್ಗೆ ಮುಂದಿನ ಪೀಳಿಗೆಗಳು ತಿಳಿದುಕೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ಇಂತಹ ಒಳ್ಳೆಯ ಕಾರ್ಯಕ್ಕೆ ಸಮುದಾಯದವರು ಒಗ್ಗಟಾಗಿ ನಮ್ಮೊಟ್ಟಿಗೆ ಕೈ ಜೋಡಿಸಬೇಕು. ಮೈಸೂರಿನಾದ್ಯಂತ 75 ರಿಂದ 80 ಸಾವಿರ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ನಿಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಇದರಿಂದಲೇ ಸಮುದಾಯಕ್ಕೆ ಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೀರಿ. ಮುಖ್ಯಮಂತ್ರಿಗಳು ಸಮಾಜದ ಎಲ್ಲಾ ತಳವರ್ಗದವರಿಗೆ ಸೌಲಭ್ಯಗಳನ್ನು ರೂಪಿಸುತ್ತಾರೆ. ಆದರೆ ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕಾದರೆ ಒಗ್ಗಟ್ಟಾಗಿ ಇರುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಮಂಜೇಗೌಡ ಅವರು ಮಾತನಾಡಿ ಅಮರ ಶಿಲ್ಪಿ ಜಕಣಚಾರಿ ಅವರು ಇಲ್ಲದಿದ್ದರೆ ಸಮಾಜದಲ್ಲಿ ನಿಮ್ಮ ಸಮುದಾಯದ ಗುರುತಿಸುವಿಕೆ ಸಾಧ್ಯವಾಗುತ್ತಿರಲಿಲ್ಲ. ಜಕಣಚಾರಿಯವರ ಸಾಧನೆ, ಪ್ರತಿಭೆ ಶಿಲ್ಪವೈಶಿಷ್ಟö್ಯ ತಿಳಿಯಲು ಈ ಕಾರ್ಯಕ್ರಮ ಬಹಳ ಉಪಯೋಗಕಾರಿಯಾಗಿದೆ. ಇದು ಮುಂದಿನ ಪೀಳಿಗೆಗೂ ತಿಳಿಯಬೇಕು. ಎಲ್ಲರೂ ತಮಗೆ ಇಚ್ಛಿಸಿದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ನಾವು ಬೆಳೆಯಬೇಕೆಂದರೆ ಸರ್ಕಾರದ ಜೊತೆಗೆ ಎಲ್ಲಾ ಸಮಾಜದ ಜನರು ಒಗ್ಗಟ್ಟಿನಲ್ಲಿರಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್ ಅವರು ಮಾತನಾಡಿ, ಸಾಹಿತ್ಯಕ್ಕೆ ಕುವೆಂಪುವಾದರೆ, ಶಿಲ್ಪಕಲೆಗೆ ಜಕಣಾಚಾರಿ ಮೆರುಗು. ವಿದ್ಯಾರ್ಥಿಗಳು ಹಾಗೂ ಪೋಷಕರು ವಾಸ್ತುಶಿಲ್ಪದ ಅಧ್ಯಯನ ಮಾಡಲು ಮನಸ್ಸು ಮಾಡಬೇಕು. ಈ ಕಲೆಯನ್ನು ಎತ್ತರಕ್ಕೆ ಬೆಳೆಸಿ, ಮುಂದಿನ ತಲೆಮಾರುಗಳು ತಿಳಿದುಕೊಳ್ಳುವಂತೆ ಮಾಡಬೇಕು. ಶಿಲ್ಪಕಲೆ ಎಂಬುದು ಎಲ್ಲರಿಗೂ ಬರುವಂತದಲ್ಲ. ಇದಕ್ಕೆ ಅದರದ್ದೇ ಆದಂತಹ ತಪಸ್ಸು, ಶ್ರದ್ದೆ ಇರಬೇಕು ಆಗ ಮಾತ್ರವೇ ಶಿಲ್ಪಕಲೆ ಒಲಿಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ, ಟಿ.ಕೆ ಕೆಂಪೇಗೌಡ ಅವರು ಮಾತನಾಡಿ, ನಾಡಿನಲ್ಲಿ ಶತಮಾನದಿಂದಲೂ ಹಲವಾರು ಸಂಗೀತಗಾರರು, ಸಂತರು ಆಚಾರ್ಯರ ಕೊಡುಗೆಗಳು ದಾಖಲಾಗಿವೆ. ಜಗತ್ತಿಗೆ ನಮ್ಮ ತಲೆಮಾರುಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು. ಇಲ್ಲವಾದರೆ ನಾವು ನಮ್ಮ ಜ್ಞಾನದ ಅಸ್ತಿತ್ವ ಕಳೆದುಕೊಳ್ಳುತ್ತೇವೆ. ಇಂದಿನ ಯುವಕರಿಗೆ ಸೃಜನಾತ್ಮಕ ಸಂವಾದದ ಅಗತ್ಯವಿದೆ. ಸತ್ಯಂ ಶಿವಂ ಸುಂದರA ಎಂಬ ಜಪ ಮಾಡಿಕೊಂಡು ಒಂದು ಸಂಸ್ಕೃತಿಯನ್ನೇ ಸೃಷ್ಟಿಸಿ ಎಲ್ಲಾ ಕವಿ, ಕಲೆಗಾರರು ಹಾಗೂ ಶಿಲ್ಪಿಗಳಿಗೆ ಜಕಣಚಾರಿಯವರು ಸ್ಫೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ವರ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಜಿ. ಎಸ್ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್ ಸೇರಿದಂತೆ ಅಮರಶಿಲ್ಪಿ ಜಕಣಾಚಾರಿ ಜಯಂತೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.