Monday, April 21, 2025
Google search engine

Homeರಾಜ್ಯಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ: ಸ್ಪರ್ಧಾಕಾಂಕ್ಷಿಗಳ ಮತಯಾಚನೆ

ಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ: ಸ್ಪರ್ಧಾಕಾಂಕ್ಷಿಗಳ ಮತಯಾಚನೆ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ ರಂಗೇರುತ್ತಿದೆ

ಮಂಡ್ಯದಲ್ಲಿ ಶಿಕ್ಷಕರು ಉಪನ್ಯಾಸಕರನ್ನು ಸ್ಪರ್ಧಾಕಾಂಕ್ಷಿಗಳು‌ ಭೇಟಿ ಮಾಡಿ ಮತ ಯಾಚನೆ ಮುಂದಾಗಿದ್ದಾರೆ.

ಮಂಡ್ಯದ ಮಂಡ್ಯದ ಎಸ್.ಬಿ.ಸಮುದಾಯಭವನದಲ್ಲಿ ಯುವ ದಿನದಂದು ನಡೆದ ಶಿಕ್ಷಕರ & ಉಪನ್ಯಾಸಕರ ಸಭೆಗೆ ಸಂಭಾವ್ಯ ಅಭ್ಯರ್ಥಿಗಳು ಭೇಟಿ ನೀಡಿದ್ದು, ಮತ ಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೇಸ್ ನಿಂದ ಆಕಾಂಕ್ಷಿಯಾಗಿರೋ ಮರಿತಿಬ್ಬೇಗೌಡ, ಜೆಡಿಎಸ್ ನಿಂದ ಕೆ.ಟಿ.ಶ್ರೀಂಠೇಗೌಡ ಹಾಗು ಹೊಸ ಮುಖ ವಿವೇಕಾನಂದ ಮತಚಯಾಚನೆ ಮಾಡಿದ್ದಾರೆ.

ಜೆಡಿಎಸ್ ನಿಂದ ಆಕಾಂಕ್ಷಿಯಾಗಿರೋ ಮತ್ತೊಂದು ಹೊಸ ಮುಖ ವಿವೇಕ್ ರಿಂದ ಕೂಡ ಜೆಡಿಎಸ್ ಬ್ಯಾನರ್ ನಡಿ ಮತಯಾಚನೆ ಮಾಡುತ್ತಿದ್ದು,  ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಶಾಸಕರಾಗಿದ್ದ ಕೆ.ಟಿ.ಶ್ರೀಕಂಠೇಗೌಡಗೆ ಜೆಡಿಎಸ್ ಟಿಕೇಟ್ ಕೈ ತಪ್ಪಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular