Sunday, April 20, 2025
Google search engine

Homeಅಪರಾಧಡೇರಿ ಕಾರ್ಯದರ್ಶಿಯಿಂದ ಹಲ್ಲೆ : ಉಪಾಧ್ಯಕ್ಷ ಸಾವು

ಡೇರಿ ಕಾರ್ಯದರ್ಶಿಯಿಂದ ಹಲ್ಲೆ : ಉಪಾಧ್ಯಕ್ಷ ಸಾವು

ನಂಜನಗೂಡು : ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ಬುದ್ದಿವಾದ ಹೇಳಿದ ಉಪಾಧ್ಯಕ್ಷನ ಮೇಲೆ ಕಾರ್ಯದರ್ಶಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಉಪಾಧ್ಯಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇಬ್ಜಾಲ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ಹಲ್ಲೆ ನಡೆಸಿದ ಆರೋಪಿ. ಹಲ್ಲೆಗೊಳಗಾದ ಮಹದೇವನಾಯಕ ಮೃತಪಟ್ಟ ಉಪಾಧ್ಯಕ್ಷ. ಶಿವು ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ. ಈ ವಿಚಾರವಾಗಿ ಹಾಲು ಉತ್ಪಾದಕರು ಉಪಾಧ್ಯಕ್ಷ ಮಹದೇವನಾಯಕ ರವರ ಗಮನಕ್ಕೆ ತಂದಿದ್ದರು. ಈ ವಿಚಾರವಾಗಿ ಬುದ್ದಿ ಹೇಳಲು ಸಂಘಕ್ಕೆ ತೆರಳಿದ ವೇಳೆ ಶಿವು ತಾಯಿ ರವಿಯಮ್ಮ ಉಡಾಫೆಯಿಂದ ಮಾತನಾಡಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಲ್ಲಿಗೆ ಬಂದ ಕಾರ್ಯದರ್ಶಿ ಶಿವು ಏಕಾ ಏಕಿ ಕಪಾಳಕ್ಕೆ ಹೊಡೆದು ನೆಲದ ಮೇಲೆ ಹಾಕಿ ಹಲ್ಲೆ ನಡೆಸಿದ್ದಾನೆ. ತೀವ್ರ ಹಲ್ಲೆಗೆ ಒಳಗಾದ ಮಹದೇವನಾಯಕನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಭಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿವು ಹಾಗೂ ರವಿಯಮ್ಮ ಮೇಲೆ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular