Monday, June 9, 2025
Google search engine

Homeರಾಜ್ಯಬಿ ಆರ್ ಅಂಬೇಡ್ಕರ್ ರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿಯವರಲ್ಲ: ಎನ್.ಮಹೇಶ್ ಕಿಡಿ

ಬಿ ಆರ್ ಅಂಬೇಡ್ಕರ್ ರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿಯವರಲ್ಲ: ಎನ್.ಮಹೇಶ್ ಕಿಡಿ

ಮದ್ದೂರು: ಬಾಬ ಸಾಹೇಬ್ ಬಿ ಆರ್ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿಯವರಲ್ಲ ಎಂದು ಮಾಜಿ ಸಚಿವ ಎನ್.ಮಹೇಶ್ ಕಿಡಿಕಾರಿದರು.

ಮದ್ದೂರು ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಛೇರಿ ಆವರಣದಲ್ಲಿ ಭೀಮ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರ ಸೋಲಿಗೆ ಕಾರಣಕರ್ತರಾದವರು ಕಾಂಗ್ರೆಸ್ ಪಕ್ಷದವರು 121 ಬಾರಿ ಸಂವಿಧಾನ ತಿದ್ದುಪಡಿ ಮಾಡಿದವರು ಕಾಂಗ್ರೆಸ್ ಪಕ್ಷದವರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪದ್ಮಭೂಷಣ ನೀಡಿದವರು ಬಿಜೆಪಿ ಪಕ್ಷದವರು ಅವರನ್ನು ಗುರುತಿಸಿ ಬೆಳಕಿಗೆ ತಂದವರು ಬಿಜೆಪಿ ಪಕ್ಷದವರು.

ಇದನ್ನು ಗಮನಿಸಿದೆ ಇರುವರು ನಮ್ಮ  ದಲಿತರು.  ಭೂ ಸುಧಾರಣೆ ಕಾಯ್ದೆ ಮಾಡಿ ಜಮೀನು ಉಳಿಸಿದರು. ಇಂದಿರಾ ಗಾಂಧಿ ಎಂದು ತಿಳಿದುಕೊಂಡಿದ್ದೀರಿ ಎಲ್ಲ  ಕಾಯ್ದೆಯನ್ನು ಜಾರಿಗೆ ತಂದವರು ಬಸವಲಿಂಗಪ್ಪ ಅವರು ದೇವರಾಜ ಅರಸು  ಅವರು. ಅದರೆ ಇಂದಿರಾಗಾಂಧಿ ಅವರನ್ನು ನಂಬಿ ಮೋಸ ಹೋಗುತ್ತಿದ್ದೀರಿ ಎಂದರು.

30 ವರ್ಷಗಳ ಕಾಲ ದಲಿತರ ಅಭಿವೃದ್ಧಿಗೆ ಚಿಂತನೆ ಮಾಡದೆ ಇದ್ದವರು ಕಾಂಗ್ರೆಸ್ ಪಕ್ಷದವರು ನಿಮಗೆ ಅಭಿವೃದ್ಧಿಗೆ ಮೊದಲು ನಾಂದಿ ಹಾಡಿದವರು ನರೇಂದ್ರ ಮೋದಿಯವರ ಬಗ್ಗೆ ಬರೆದಿರುವ ಪುಸ್ತಕವನ್ನು ಪ್ರತಿಯೊಬ್ಬ ದಲಿತರು ದಲಿತರಿಗೆ ಏನೆಲ್ಲಾ ಅಭಿವೃದ್ಧಿ ಹಾಗೂ ಯೋಜನೆಗಳನ್ನು ತಂದಿದ್ದಾರೆ ಎಂದು ತಿಳಿಯುತ್ತದೆ. ಇದನ್ನು ಅರಿತು ಈ ಬಾರಿ ಬಿಜೆಪಿ ಪಕ್ಷದ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆಕೊಟ್ಟರು.

ಈ ವೇಳೆ  ರಾಜ್ಯ ಎಸ್ ಸಿ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಸಿಮೆಂಟ್ ಮಂಜು. ಜಿಲ್ಲಾ ಅಧ್ಯಕ್ಷ ಇಂದ್ರೇಶ್ ಬಿಜೆಪಿ ಮುಖಂಡ ಮನ್ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ. ಅಶೋಕ್ ಜಯರಾಮ್. ಸಿದ್ದರಾಮಯ್ಯ. ಮುನಿರಾಜು ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಕಾರ್ಯದರ್ಶಿ ಎಂಸಿ.ಸಿದ್ದು. ಶಿವದಾಸ್ ಸತೀಶ್. ಕೆಂಪು ಬೋರಯ್ಯ. ದ್ಯಾವಯ್ಯ. ಯಮಂದುರ್ ಸಿದ್ದರಾಜು. ಬೋರೆಯ್ಯ. ಮಹಿಳಾ ಬಿಜೆಪಿ ಅಧ್ಯಕ್ಷ ಶ್ವೇತ. ರಶ್ಮಿ . ಸೇರದಂತೆ ಹಲವಾರು ಉಪಸ್ಥಿತರಿದ್ದರು ತಾಲೂಕಿನಿಂದ ಎಸ್ ಸಿ ಮೋರ್ಚಾದ ಪದಾಧಿಕಾರಿಗಳು ಆಗಮಿಸಿದ್ದರು.

RELATED ARTICLES
- Advertisment -
Google search engine

Most Popular