Saturday, April 19, 2025
Google search engine

Homeರಾಜ್ಯಸುದ್ದಿಜಾಲನವ ಜೋಡಿಗಳ ನವ ಜೀವನಕ್ಕೆ ಶುಭವಾಗಲಿ : ದರ್ಶನ್ ದ್ರುವನಾರಾಯಣ್

ನವ ಜೋಡಿಗಳ ನವ ಜೀವನಕ್ಕೆ ಶುಭವಾಗಲಿ : ದರ್ಶನ್ ದ್ರುವನಾರಾಯಣ್

ಮೈಸೂರು: ಶ್ರೀ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಸರಳ ಸಾಮೂಹಿಕ ವಿವಾಹದ ಸದುಪಯೋಗ ಪಡೆದು ಎಂಟು ನವ ಜೋಡಿಗಳು ನವ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನವ ಜೋಡಿಗಳಿಗೆ ಶುಭವಾಗಲಿ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ದ್ರುವನಾರಾಯಣ್ ಅವರು ಶುಭ ಹಾರೈಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದತ್ತಿಗಳ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ “ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ಇದು ಉತ್ತಮವಾದ ಕಾರ್ಯಕ್ರಮ. ಸಾಮೂಹಿಕ ವಿವಾಹ ಆಗುವವರಿಗೆ ಸರ್ಕಾರದಿಂದಲೂ ಪ್ರೋತ್ಸಾಹಧನ ದೊರೆಯುತ್ತದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳು ಹಾಗೂ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ಆರ್.ಲೋಕನಾಥ್ ಅವರು ಮಾತನಾಡಿ ಮಾಂಗಲ್ಯ ಭಾಗ್ಯ ಕಾರ್ಯಕ್ರಮವು ೨೦೨೦ ರಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ಆದರೆ ಕರೋನಾ ಕಾರಣದಿಂದ ೨೦೨೨ ರಲ್ಲಿ ಮೊದಲ ಬಾರಿಗೆ ಮೈಸರು ಜಿಲ್ಲೆಯಲ್ಲಿ ನಡೆಯಿತು. ಇಂದು ಎರಡನೆ ಬಾರಿಗೆ ಜರುಗುತ್ತಿದೆ. ಈ ಕಾರ್ಯಕ್ರಮವನ್ನು ಆಯೋಜಿಸಲು ನವೆಂಬರ್ ತಿಂಗಳಿನಿoದ ವ್ಯಾಪಕ ಪ್ರಚಾರ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದಂತಹ ಜೋಡಿಗಳಲ್ಲಿ ನಮ್ಮ ಮಾರ್ಗಸೂಚಿಗೆ ಅರ್ಹರಿರುವವರಿಗೆ ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗ ಪಡಿಸಿಕೊಂಡ ಹೊಸ ವಧು- ವರರಿಗೆ ಶಭವಾಗಲಿ ಎಂದರು.

RELATED ARTICLES
- Advertisment -
Google search engine

Most Popular