ರಾಮನಗರ: ಬನ್ನಿಕುಪ್ಪೆ (ಬಿ) ಗ್ರಾಮಪಂಚಾಯಿತಿಯ ಕಾಕರಾಮನಹಳ್ಳಿ ಮಾರ್ಗವಾಗಿ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧ ಚಿತ್ರವು ಫೆ.೪ರಂದು ಮಧ್ಯಾಹ್ನ ೧ ಗಂಟೆಗೆಬಿಡದಿ ಪುರಸಭೆ ಸರಹದ್ದಿಗೆ ಆಮಿಸಲಿದೆ. ಸಂವಿಧಾನ ಜಾಗೃತಿ ಜಾಥದ ಸ್ತಬ್ಧ ಚಿತ್ರವನ್ನು ಪುರಸಭೆ ವತಿಯಿಂದ ಸ್ವಾಗತಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಬಿಡದಿ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.