Monday, April 21, 2025
Google search engine

Homeರಾಜ್ಯಅಯೋಧ್ಯೆ ರಾಮನಿಗೆ ೨೭ ಕಿಲೋ ತೂಗುವ ಬೆಳ್ಳಿದೀಪ ನೀಡಿದ ಆಚಾರ್ಯ ದಂಪತಿ

ಅಯೋಧ್ಯೆ ರಾಮನಿಗೆ ೨೭ ಕಿಲೋ ತೂಗುವ ಬೆಳ್ಳಿದೀಪ ನೀಡಿದ ಆಚಾರ್ಯ ದಂಪತಿ

ಉಡುಪಿ: ಮುಂಬೈ ಉದ್ಯಮಿ ನಾಗೇಂದ್ರ ಆಚಾರ್ಯ-ಅರುಣಾ ಆಚಾರ್ಯ ದಂಪತಿ ಅಯೋಧ್ಯೆ ರಾಮನಿಗೆ ಬೆಳ್ಳಿಯ ಎರಡು ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದಾರೆ. ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಅವರು ದೀಪಗಳನ್ನು ಅರ್ಪಿಸಿದ್ದಾರೆ.

ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ ೧೩.೫ ಕೆ.ಜಿ.ತೂಕವಿವೆ. ಉದ್ಯಮಿ ಆಚಾರ್ಯ ದಂಪತಿ, ಎ.ಕೆ. ಆರ್. ಟ್ರಸ್ಟ್‌ನ ವಿಶ್ವಸ್ಥರೂ ಆಗಿದ್ದು ಉಡುಪಿಯ ಕೃಷ್ಣಮಠ, ಅಷ್ಟ ಮಠಗಳ ಭಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ ಬೆಳಗಿದರು.

RELATED ARTICLES
- Advertisment -
Google search engine

Most Popular