Saturday, April 19, 2025
Google search engine

Homeಅಪರಾಧಕಣ್ಣಿಗೆ ಖಾರಾ ಪುಡಿ ಎರಚಿ ಸಂಸದ ಡಾ.ಉಮೇಶ್ ಜಾದವ್ ಬೆಂಬಲಿಗನ ಹತ್ಯೆ

ಕಣ್ಣಿಗೆ ಖಾರಾ ಪುಡಿ ಎರಚಿ ಸಂಸದ ಡಾ.ಉಮೇಶ್ ಜಾದವ್ ಬೆಂಬಲಿಗನ ಹತ್ಯೆ

ಕಲಬುರಗಿ: ಬಿಎಸ್‌ ಎನ್‌ ಎಲ್ ಗೆ ಸಲಹಾ ಸಮಿತಿ ಸದಸ್ಯನಾಗಿ ನೇಮಕವಾಗಿದ್ದ, ಸಂಸದ ಡಾ. ಉಮೇಶ ಜಾಧವ್ ಬೆಂಬಲಿಗನನ್ನು ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆಗೈದ ಘಟನೆ ಅಫಜಲಪುರ ತಾಲೂಕಿನ ಭೀಮಾ ತೀರ ಸಾಗನೂರ ಗ್ರಾಮದಲ್ಲಿ ನಡೆದಿದೆ.

ಗಿರೀಶ್ ಚಕ್ರ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ. ‌
ಸಾಗನೂರ ಗ್ರಾಮದ ಜಮೀನಿನಲ್ಲಿ ಕಳೆದ ರಾತ್ರಿ ಕೊಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಬಿಎಸ್‌ ಎನ್‌ ಎಲ್ ಸಲಹಾ ಸಮಿತಿ‌ ನಿರ್ದೇಶಕ ನೇಮಕ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಯಿಸಿ ಸ್ನೇಹಿತರೇ ಬರ್ಬರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular