Saturday, April 19, 2025
Google search engine

Homeಸ್ಥಳೀಯಮಾ.೧೫ರಂದು ನೀರಾವರಿ ಕಚೇರಿಗೆ ಮುತ್ತಿಗೆ

ಮಾ.೧೫ರಂದು ನೀರಾವರಿ ಕಚೇರಿಗೆ ಮುತ್ತಿಗೆ

ಮೈಸೂರು: ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದರ ವಿರುದ್ಧ ಕಾವೇರಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಹೋರಾಟದ ಮುಂದಿನ ಭಾಗವಾಗಿ ಮಾ.೧೫ರಂದು ಶುಕ್ರವಾರ ಬೆಳಗ್ಗೆ ೧೧ಕ್ಕೆ ನಗರದ ಕೆ.ಆರ್.ಎಸ್ ರಸ್ತೆಯಲ್ಲಿನ ನೀರಾವರಿ ಕಚೇರಿ ಬಳಿ ಮುತ್ತಿಗೆ ಹಾಕಿ ಅಂದು ಕಚೇರಿ ಬಂದ್ ಮಾಡಿಸುವುದಾಗಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ನೀರಿನ ಕೊರತೆ ಇರುವುದರ ನಡುವೆಯೂ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುತ್ತಿರುವ ಮಾಹಿತಿ ಬಂದಿರುವುದು ಆತಂಕದ ವಿಷಯವಾಗಿದೆ. ಈ ಮೊದಲು ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ನಡೆಸಿದ ಹೋರಾಟ, ಕರೆ ನೀಡಿದ್ದ ಬಂದ್ ಸಮಯದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈಗಿನ ಕುಡಿಯುವ ನೀರಿಗೂ ತತ್ವಾರ ಪಡಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಕೇಂದ್ರ ಸರ್ಕಾರ ಸಹಾ ಕೂಡಲೇ ಮಧ್ಯ ಪ್ರವೇಶಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದಕ್ಕೆ ತಡೆ ಹಾಕಬೇಕೆಂದು ಮನವಿ ಮಾಡಲಾಗುವುದೆಂದರು.

RELATED ARTICLES
- Advertisment -
Google search engine

Most Popular