Monday, April 21, 2025
Google search engine

Homeರಾಜಕೀಯನನ್ನನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಗೌರವ ತಂದುಕೊಡಿ: ಎಂ.ಲಕ್ಷ್ಮಣ್‌‍ ಮನವಿ

ನನ್ನನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಗೌರವ ತಂದುಕೊಡಿ: ಎಂ.ಲಕ್ಷ್ಮಣ್‌‍ ಮನವಿ

ಮೈಸೂರು: ನನ್ನನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ತಂದುಕೊಡಿ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್‌‍ ಅಭ್ಯರ್ಥಿ ಎಂ.ಲಕ್ಷ್ಮಣ್‌‍ ಮನವಿ ಮಾಡಿದರು.

ನಗರದ ಕಾಂಗ್ರೆಸ್‌‍ ಭವನದಲ್ಲಿ ಜಿಲ್ಲಾ, ನಗರ ಕಾಂಗ್ರೆಸ್‌‍ ಮತ್ತು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 10 ವರ್ಷಗಳಿಂದ ಸ್ವಂತ ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿ ಸೋತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಕೊರಗಿದೆ. ಕುರುಬ ಸಮುದಾಯಕ್ಕೆ ಟಿಕೆಟ್‌‍ ನೀಡಿದ್ದರಿಂದ ಸೋಲಾಯಿತು ಎಂಬ ಕಾರಣ ಬಂದ ಹಿನ್ನೆಲೆಯಲ್ಲಿ ಈ ಬಾರಿ ಒಕ್ಕಲಿಗ ಸಮುದಾಯದ ನನಗೆ ಟಿಕೆಟ್‌‍ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯ ಮತ ನೀಡಬೇಕು ಎಂದು ಮನವಿ ಮಾಡಿದರು.

ನಾನು ಹಣೆಯ ಮೇಲೆ ಜಾತಿ ಹೆಸರು ಬರೆದುಕೊಂಡವನಲ್ಲ. ನಾನು ಹುಟ್ಟಿದ್ದು ಒಕ್ಕಲಿಗನಾಗಿ, ಆದರೆ ಬೆಳೆಯುತ್ತ ವಿಶ್ವಮಾನನಾದೇ. ಆದರೆ, ಪ್ರತಾಪ ಸಿಂಹ ಟಿಕೆಟ್‌‍ ತಪ್ಪಿರುವ ಹತಾಸೆಯಿಂದ ಮಾಧ್ಯಮಗಳು ಮುಂದೆ ಜಾತಿ ಪ್ರಶ್ನಿಸುತ್ತಿದ್ದಾರೆ, ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ವಿರುದ್ಧ ಮಾತನಾಡಬಾರದು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಕಾರಣ ಕೇಳಿದರೇ ಉತ್ತರಿಸುತ್ತಿಲ್ಲ ಎಂದು ಹೇಳಿದರು.

ಯದುವೀರ್‌‍ ಕೃಷ್ಣದತ್ತ ಚಾಮರಾಜ ಒಡೆಯರ್‌‍ ಅವರು ಮಹಾರಾಜರು, ಅರಮನೆ ಇರುವವರು. ನಾನು ಬೀದಿಯಲ್ಲಿ ಇರುವವನು, 30 ವರ್ಷಗಳಿಂದ ಹೋರಾಟ ಮಾಡಿ ಬಂದವನು. ರಿಯಲ್‌‍ ಎಸ್ಟೇಟ್‌‍ ಮಾಡುವವನಲ್ಲ, ಸಾವಿರಾರು ಕೋಟಿ ಒಡೆಯನಲ್ಲ. ಫುಟಾಬಾತ್‌‍ನಲ್ಲಿ ಊಟ-ತಿಂಡಿ-ಟೀ ಕುಡಿಯುವವನು. ಈಗ ಜನ ಸಾಮಾನ್ಯರು ತೀರ್ಮಾನ ಮಾಡಬೇಕು. ಸಾಮಾನ್ಯರಿಗೆ ಸಿಗುವ ವ್‌ಯಕ್ತಿ ಬೇಕಾ ಅಥವಾ ಟಿಕೆಟ್‌‍ ತೆಗೆದುಕೊಂಡು ಅರಮನೆಗೆ ಹೋಗಿ ಭೇಟಿ ಮಾಡುವ ವ್‌ಯಕ್ತಿ ಬೇಕಾ.

– ಎಂ.ಲಕ್ಷ್ಮಣ್‌‍, ಕಾಂಗ್ರೆಸ್‌‍ ಅಭ್ಯರ್ಥಿ.

ಮೈಸೂರು ಕೊಡಗು ಭಾಗದಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಪೂರಕ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ನನ್ನನ್ನು ಸೋಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಬೇಡಿ. ನಾನು ಸೋತು ಸೋತು ಸಾಕಾಗಿದೆ. ಕೊನೆಯದಾಗಿ ಕಾಂಗ್ರೆಸ್‌‍ ಪಕ್ಷ ಅವಕಾಶ ನೀಡಿದೆ. ಈ ಬಾರಿ ಸೋತರೆ ಸತ್ತಂತೆ ಎಂದು ಪುನರ್‌‍ ಉಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳನ್ನು ಭೀಕ್ಷುಕರನ್ನಾಗಿ ಮಾಡಲಿದೆ. ಈಗಾಗಲೇ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ಸೌಲಭ್ಯ ದೊರೆಕದಂತೆ ಮಾಡುತ್ತಿದೆ. ಏಕ ರೂಪ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಗೊಳಿಸಲಿದೆ ಎಂದು ದೂರಿದರು.

ಸಂಸದ ಪ್ರತಾಪ ಸಿಂಹ ವಿರುದ್ಧ ಸೋಲಿಸಬೇಕು ಎಂದು ಹೋರಾಟ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌‍ ಅವರಿಗೆ ಮನವರಿಕೆ ಮಾಡಿ ಟಿಕೆಟ್‌‍ ಪಡೆದುಕೊಂಡೆ. ಆದರೆ, ರಾಜಕೀಯ ಕುಸ್ತಿಗೆ ಅವರೆ ಇಲ್ಲ. ಬೇರೆಯವರನ್ನು ಕಳುಹಿಸಿದ್ದಾರೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಕಿಡಿ ಹೊತ್ತಿಸುವುದು ಬಿಟ್ಟರೇ ಏನನ್ನು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳನ್ನು ಪುಸ್ತಕದಲ್ಲಿ ಪ್ರಕಟಿಸಿ ತನ್ನದು ಎಂದು ಸುಳ್ಳೇಳಿ ಊರೇಲ್ಲ ತಿರುಗಾಡುತ್ತಿದ್ದಾರೆ. ಇವರ ಸುಳ್ಳಗಳನ್ನು ಕಾಂಗ್ರೆಸ್ಸಿಗರು ಬಯಲು ಮಾಡದ್ದಿದ್ದರೇ ಕೆಆರ್‌‍ಎಸ್‌‍ ಅಣೆಕಟ್ಟೆಯನ್ನು ನಮ ತಾತ ನಿರ್ಮಿಸಿದರು ಎಂದು ಹೇಳುತ್ತಿದ್ದರು. ಇದನ್ನು ನಂಬುವ ಮೂರ್ಖರು ನಮಲ್ಲಿದ್ದಾರೆ ಎಂದು ಟೀಕಿಸಿದರು.

ಇದಕ್ಕೂ ಮುನ್ನು ನಮ ಸಂಸದರು ನಮ ಹೆಮೆ ಪೋಸ್ಟರ್‌‍ ಅನ್ನು ಬಿಡುಗಡೆಗೊಳಿಸಲಾಯಿತು.

ಕಾಂಗ್ರೆಸ್‌‍ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌‍, ನಗರಾಧ್ಯಕ್ಷ ಆರ್‌‍.ಮೂರ್ತಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಸಿನ್‌‍ ಖಾನ್‌‍, ಶಿವಪ್ರಸಾದ್‌‍, ಮಾಧ್ಯಮ ವಕ್ತಾರ ಕೆ.ಮಹೇಶ್‌‍ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular