Tuesday, April 22, 2025
Google search engine

Homeಅಪರಾಧಮಾನಹಾನಿ‌ ಕೇಸ್‌: ಮಾಜಿ ಶಾಸಕ ಸುರೇಶ್ ಗೌಡಗೆ ಕೋರ್ಟ್ ಸಮನ್ಸ್ ಜಾರಿ

ಮಾನಹಾನಿ‌ ಕೇಸ್‌: ಮಾಜಿ ಶಾಸಕ ಸುರೇಶ್ ಗೌಡಗೆ ಕೋರ್ಟ್ ಸಮನ್ಸ್ ಜಾರಿ

ಮಂಡ್ಯ: ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಮಾನಹಾನಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿ ಅರ್ಜಿ ಪುರಸ್ಕರಿಸಿ ಮೇ-21 ಕೋರ್ಟ್ ಗೆ ಹಾಜರಾಗುವಂತೆ ಸುರೇಶ್ ಗೌಡಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಸಚಿವ ಚಲುವರಾಯ ಸ್ವಾಮಿ ಅವರು  ಕ್ರಿಮಿನಲ್ ಮಾನಹಾನಿ  ಪ್ರಕರಣ ದಾಖಲು ಮಾಡಲಾಗಿದೆ.

ಕಳೆದ ಆಗಸ್ಟ್  2023 ರಂದು ಮಾಜಿ ಶಾಸಕ ಸುರೇಶ್ ಗೌಡ ಸಚಿವ ಚಲುವರಾಯಸ್ವಾಮಿ 300- 400 ಕೋಟಿ ಲೂಟಿ ಮಾಡಿರೋ ಬಗ್ಗೆ ಆಧಾರ ರಹಿತ ಹೇಳಿಕೆ‌ ನೀಡಿದ್ದು, ಈ ಹೇಳಿಕೆ ಖಂಡಿಸಿ ಸಚಿವರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಮೂಲಕ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೇಸ್ ಮುಂದಾಗಿದೆ.

RELATED ARTICLES
- Advertisment -
Google search engine

Most Popular