ಮಂಡ್ಯ: ಜಿಲ್ಲೆಯಲ್ಲಿ ಬಿಸಿಲಿಗೆ ಬೇಗೆಗೆ ಜನರು ಹೈರಾಣಾಗಿದ್ದು, ಸೆಕೆ ತಾಳಲಾರದೆ ಜನರು ಕಾವೇರಿ ನದಿ ನೀರಿಗಿಳಿದಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ವಿಪರೀತ ಸೆಖೆಯ ಅನುಭವವಾಗುತ್ತಿದ್ದು, ಬಿಸಿಲಿನ ಕಾವಿನಿಂದಾಗಿ ಕಾವೇರಿ ನದಿ ದಂಡೆಯಲ್ಲಿ ಜನರ ದಂಡು ಕಂಡುಬರುತ್ತದೆ.
ಕುಟುಂಬದ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಾ ಬಿಸಿಲಿನ ರಕ್ಷಣೆ ಪಡೆಯುತ್ತಿದ್ದಾರೆ.