Monday, April 21, 2025
Google search engine

Homeರಾಜ್ಯಸುದ್ದಿಜಾಲಪರಿಹಾರ, ನಾಲೆ ಹಾಗೂ ಒಳ ಚರಂಡಿ ಮುಚ್ಚಿರುವುದು, ಉಪ ವಿಭಾಗಾಧಿಕಾರಿಗೆ ಜಿಲ್ಲಾ ಸಂಚಾಲಕ ಚಂದ್ರು ಮನವಿ

ಪರಿಹಾರ, ನಾಲೆ ಹಾಗೂ ಒಳ ಚರಂಡಿ ಮುಚ್ಚಿರುವುದು, ಉಪ ವಿಭಾಗಾಧಿಕಾರಿಗೆ ಜಿಲ್ಲಾ ಸಂಚಾಲಕ ಚಂದ್ರು ಮನವಿ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಿರು ಕಾಲುವೆ ಮುಚ್ಚಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ, ಒಳ ಚರಂಡಿ, ಮುಚ್ಚಿರುವುದು, ಭೂ ಸ್ವಾಧೀನ ಪರಿಹಾರ ನೀಡದಿರುವ ಬಗ್ಗೆ ಉಪ – ವಿಭಾಗಾಧಿಕಾರಿ ರವರಿಗೆ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಚಂದ್ರು ರವರು ಮನವಿ ಪತ್ರ ಸಲ್ಲಿಸಿದರು.

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ ಬೆಂಗಳೂರು – ಜಲಸೂರು ಮಾರ್ಗವಾಗಿ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ ( ಕೆ – ಶಿಪ್ )ವತಿಯಿಂದ ಕೆ ಎನ್ ಆರ್ ಕಂಟ್ರಕ್ಷನ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಕೆಲವು ಮಾಲೀಕರಿಗೆ ಪರಿಹಾರ ನೀಡಿಲ್ಲ, ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಪಟ್ಟಣದ ಸಮೀಪ ಇರುವ ಕೆ ಇ ಬಿ ಬಡಾವಣೆ ಬಳಿ ಹಾರಂಗಿ ಕಿರು ಕಾಲುವೆಯನ್ನು ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು, ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿ ತುಂಬಾ ತೊಂದರೆಯಾಗುತ್ತಿದೆ.

ಮೂಡಲಬೀಡು ಗೇಟ್ ಹತ್ತಿರ ಪ್ರಸ್ತುತ ವಾಗಿ ಇದ್ದ ಒಳ ಚರಂಡಿಯನ್ನು ಮುಚ್ಚಿ, ಮಳೆ ಗಾಲ ಬಂದಾಗ ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಮನೆಯ ಸುತ್ತ – ಮುತ್ತ ನೀರು ತುಂಬಿ, ಮನೆಗಳು ಶಿಥಿಲ ಗೊಳ್ಳುತ್ತಿವೆ, ವಾಸಿಸುವ ಕುಟುಂಬಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಇದ್ದು, ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿದ್ದಾರೆ, ಈ ಭಾಗದ ಜನತೆ ಕೇಳಲು ಹೋದರೆ ಕೆ ಎನ್ ಆರ್ ಕಂಪನಿಯವರು ಹೆದರಿಸುತ್ತಿದ್ದಾರೆ, ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.

RELATED ARTICLES
- Advertisment -
Google search engine

Most Popular