Sunday, April 20, 2025
Google search engine

Homeಸ್ಥಳೀಯಹೂವಿನ ಸುರಿಮಳೆ, ಜೈಕಾರ, ಚಪ್ಪಾಳೆಯೊಂದಿಗೆ ಸೇನೆಯ ತರಬೇತಿ ಮುಗಿಸಿದ ಸೈನಿಕರಿಗೆ ಸ್ವಾಗತ

ಹೂವಿನ ಸುರಿಮಳೆ, ಜೈಕಾರ, ಚಪ್ಪಾಳೆಯೊಂದಿಗೆ ಸೇನೆಯ ತರಬೇತಿ ಮುಗಿಸಿದ ಸೈನಿಕರಿಗೆ ಸ್ವಾಗತ

ಮೈಸೂರು:ನಗರದ ಬೆಳವಾಡಿ ಗ್ರಾಮದ, ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿ, ಸೇನೆ, ಅರೆ ಸೇನೆ ಪೊಲೀಸ್ ನಂತಹ ಹುದ್ದೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗೆ 3 ವರ್ಷಗಳಿಂದ 234 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ತರಬೇತಿ ಕೇಂದ್ರ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸೈನಿಕ ಅಕಾಡೆಮಿ ಮೈಸೂರು ಸಂಸ್ಥೆರವರಿಂದ ತರಬೇತಿ ಪಡೆದು, ಸೇನೆಯ ತರಬೇತಿ ಮುಗಿಸಿ ರಜೆಗೆ ಸೇನಾ ಸಮವಸ್ತ್ರದಲ್ಲಿ ಬಂದಿರುವ ಸೈನಿಕರುಗಳನ್ನು ಹೂವಿನ ಸುರಿಮಳೆ, ಜೈಕಾರ, ಚಪ್ಪಾಳೆಯೊಂದಿಗೆ ಬಹಳ ಅದ್ದೂರಿಯಾಗಿ ಸ್ವಾಗತಿಸಿ ಯುವ ಸೈನಿಕರನ್ನು ಗೌರವಿಸಲಾಯಿತು.

ಈ ಒಂದು ದೃಶ್ಯ ತರಬೇತಿ ಪಡೆಯುತ್ತಿರುವ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವೀಕ್ಷಣೆ ಮಾಡುತ್ತಿರುವ ಯುವಪೀಳಿಗೆಗೆ ಉತ್ಸಾಹ ತುಂಬಿ ಮಾದರಿ ನೀಡಿತು.

ಸೈನಿಕ ಅಕಾಡೆಮಿಯ ಸಂಸ್ಥಾಪಕರು ಕಮಾಂಡೋ ಶ್ರೀಧರ್ ಸಿ ಎಂ ಮಾತನಾಡಿ ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ನಾವೆಲ್ಲರೂ ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ ಸುಮಾರು ವರ್ಷಗಳವರೆಗೆ ನಮ್ಮ ಶಾಲೆಯಲ್ಲಿ ಓದಿರುವ ಮಕ್ಕಳುಗಳು ಮುತ್ತಿನಂತೆಯೇ ಇದ್ದು ಶ್ರದ್ಧೆಯಿಂದ ಓದಿದರು, ಯುವಕರು ದೇಶ ಸೇವೆ ಸಲ್ಲಿಸಲು ಮುಂದೆ ಬರಬೇಕು.

ಉಪಸ್ಥಿತಿ ಆಗ್ನಿವೀರರು ವರುಣ, ರೆವಂತ್, ಅರ್ಜುನ್, ಆಂತೋನಿ ಪ್ರತಾಪ್, ಸೊಗನ್ ರವರು ಹಾಗು ಸಹ ಸಂಸ್ಥಾಪಕರು ಅನಿತಾ ಶ್ರೀಧರ, ಅಧ್ಯಾಪಕರು ರಘು, ಅಧ್ಯಾಪಕರು ಸಂತೋಷ, ಸಿಬ್ಬಂದಿಗಳು ದಿಲೀಪ್, ಚೇತನ್, ಪವನ್, ಕಾರ್ತಿಕ್ ಹಾಗು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿದ್ದರು.

RELATED ARTICLES
- Advertisment -
Google search engine

Most Popular