Monday, April 21, 2025
Google search engine

Homeರಾಜಕೀಯಮದ್ದೂರು ತಾಲೂಕಿನ ಪಿ ಕಾರ್ಡ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಕುದರಗುಂಡಿ ಸಿದ್ದೇಗೌಡ ಅವಿರೋಧ ಆಯ್ಕೆ

ಮದ್ದೂರು ತಾಲೂಕಿನ ಪಿ ಕಾರ್ಡ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಕುದರಗುಂಡಿ ಸಿದ್ದೇಗೌಡ ಅವಿರೋಧ ಆಯ್ಕೆ

ಮದ್ದೂರು: ಮದ್ದೂರು ತಾಲೂಕಿನ ಪಿ ಕಾರ್ಡ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಕುದರಗುಂಡಿ ಸಿದ್ದೇಗೌಡ ಅವಿರೋಧ ಆಯ್ಕೆಯಾದರು.

ಈ ಹಿಂದೆ ಇದ್ದ ಅಧ್ಯಕ್ಷ ಕೆಂಪೇಗೌಡರ ರಾಜೀನಾಮೆಯಿಂದ ತೆರುವಾಗಿದ್ದ, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು, ಯಾರು ಕೂಡ ನಾಮಪತ್ರ ಸಲ್ಲಿಸದ ಹಿನ್ನೆಲೆ ಸಿದ್ದೇಗೌಡರನ್ನು ಚುನಾವಣಾಧಿಕಾರಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಈ ವೇಳೆ ಮಾತನಾಡಿದ ಗೌತಮ ಅಧ್ಯಕ್ಷ ಸಿದ್ದೇಗೌಡ ಪಿ ಕಾರ್ಡ್ ಬ್ಯಾಂಕ್ ನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಬ್ಯಾಂಕನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತೇನೆ.

ನನ್ನೆಲ್ಲಾ ನಿರ್ದೇಶಕರ ಹಾಗೂ ಮಾಜಿ ಶಾಸಕರ ಆಶೀರ್ವಾದದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಕೆಂಪೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ಕೃಷ್ಣೇಗೌಡ, ಮುತ್ತುರಾಜು, ಮಹದೇವಯ್ಯ, ಮಧು, ಸಿದ್ದ ಮರಿ, ಸಿದ್ದರಾಮು, ಈರೇಗೌಡ ,ಸವಿತಾ, ಗೌರಮ್ಮ, ಸೇರಿದಂತೆ ಇತರರು ಹಾಜರಿದ್ದರು.

ಬಳಿಕ ಅಪಾರ  ಅಭಿಮಾನಿಗಳು ಹಾಗೂ ಮುಖಂಡರು ಕಾರ್ಯಕರ್ತರು ಸಿದ್ದೇಗೌಡರನ್ನು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular