ಹನಗೋಡು: ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿದ್ದ ಸುಮಾರು ೬ ವರ್ಷದ ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ಹನಗೋಡು ಹೋಬಳಿಯ ಕೂಡ್ಲೂರಿನಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಾಯಿ, ಆಡು ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ಹೊತ್ತೊಯ್ಯುತ್ತಿತ್ತು. ಗ್ರಾಮದ ವಿನ್ಸೆಂಟ್ರಿಗೆ ಸೇರಿದ ಜಮೀನಿನಲ್ಲಿ ಕರುವನ್ನು ಕೊಂದು ಹಾಕಿತ್ತು. ವಿನ್ಸೆಂಟ್ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಆರ್.ಎಫ್.ಓ.ನಂದಕುಮಾರ್, ಡಿ.ಆರ್.ಎಫ್.ಓ. ಮಲ್ಲಿಕಾರ್ಜುನ್ ಭೇಟಿ ಇತ್ತು ಪರಿಶೀಲನೆ ನಡೆಸಿ ಬೋನ್ ಇರಿಸಿದ್ದರು. ಬೋನಿನಲ್ಲಿರಿಸಿದ್ದ ನಾಯಿ ತಿನ್ನುವ ಆಸೆಯಿಂದ ಒಳಹೊಕ್ಕಿದ್ದ ಚಿರತೆ ಸೆರೆಯಾಗಿದೆ.