ಮಂಡ್ಯ: ಗೃಹಲಕ್ಷ್ಮಿ ಯೋಜನೆಯ ೧೧ ಮತ್ತು ೧೨ನೇ ಕಂತಿನ ಹಣ ರೂ ೪,೦೦೦ ಫಲಾನುಭವಿಗಳ ಖಾತೆಗೆ ಪೇಮೆಂಟ್ ಹಣ ಇಂದಿನಿಂದ ವರ್ಗಾವಣೆ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಈ ಬಗ್ಗೆ ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ. ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ ೨ ತಿಂಗಳ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಯಜಮಾನಿಯರು, ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣವನ್ನು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ ೨ ದಿನದ ಒಳಗೆ ಎರಡು ಕಂತುಗಳ ಹಣ ಅಂದರೆ ೧೧ ಮತ್ತು ೧೨ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ೪೦೦೦ ರೂಪಾಯಿ ಬರುವ ಸಾಧ್ಯತೆ ಕೂಡ ಇದೇ ಎನ್ನಲಾಗಿದೆ.