ಚದುರಂಗ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು: ಕುವೆಂಪು ನಗರದಲ್ಲಿರುವ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಿದ್ದು 60ಕ್ಕೂ ಹೆಚ್ಚು ಮಕ್ಕಳು ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮೊದಲನೇ ಬಹುಮಾನ ವೈಷ್ಣವಿ ಎಲ್ , ದ್ವಿತೀಯ ಬಹುಮಾನ ವೈಭವ ಎಚ್ ಆರ್,ತೃತೀಯ ಚಿರಾಗ್ ಹೆಗ್ಡೆ ಎಮ್ ರವರಿಗೆ ಬಹುಮಾನ ವಿತರಿಸಲಾಯಿತು.
ವಿಶೇಷ ಬಹುಮಾನವಾಗಿ ಅರ್ಪನ್ ಅರುಣ್, ಕಿಶಾನ್ ಭಾರದ್ವಾಜ್ ಸಿ, ಚಿರಂತ್ ಬಿ, ಹಿಮಗ್ನ ಆರ್, ದರ್ಶಿಲ್ ಆರ್, ಹೃತ್ವಿಕ್ ಆರ್, ನವನೀತ್ ಎಂ ಕೆ, ಆರ್ಯನ್ ಜಿ ಕೆ, ನಕುಲ್, ಶ್ರಿಯನ್ ಗೌಡ ಎನ್ ಎಸ್, ನೆಚ್ಚಿನ್ ಆರ್, ಕನಿಷ್ಕ್ ,ಪ್ರಭವ್ ಭಟ್, ನೈನಿಕ ಮಕ್ಕಳಿಗೆ ವಿಶೇಷ ಬಹುಮಾನ ನೀಡಿ ಮಾತನಾಡಿದ ಅವರು
ಚೆಸ್ ಎಂಬುದು ಭಾರತೀಯ ಪುರಾತಕ ಒಳಾಂಗಣ ಕ್ರೀಡೆಯಾಗಿದೆ.
ರಾಜ ಮಹಾರಾಜರು ತಮ್ಮ ಬುದ್ದಿಗೆ ಚುರುಕು ನೀಡುವ ನಿಟ್ಟಿನಲ್ಲಿ ಚದರುಂಗ ಆಟ ಆಡುತ್ತಿದ್ದರು. ಅಂತಹ ಕ್ರೀಡೆಯನ್ನು ಭಾರತವು ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಷನ್ ಅಧ್ಯಕ್ಷರಾದ ಪಿ ಪುಷ್ಪಲತಾ, ಚದುರಂಗ ತರಬೇತಿದಾರ ಸನ್ನತ್, ಕರುಣೆ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರುಕ್ಮಿಣಿ ಎಚ್, RRR ಎಸ್ಟೇಟಿನ ನಿರ್ದೇಶಕರಾದಂತ ಲಾವಣ್ಯ ಮಹೇಶ್ ಎಲ್, ಚಾರುಲತಾ, ಅನುಷ, ಪ್ರಿಯಾಂಕಾ, ಆಕಾಶ್, ಹಾಗೂ ಇನ್ನಿತರರು ಹಾಜರಿದ್ದರು.