Sunday, April 20, 2025
Google search engine

Homeರಾಜಕೀಯಚನ್ನಪಟ್ಟಣ ಟಿಕೆಟ್‌: ಸಿ.ಪಿ. ಯೋಗೇಶ್ವರ್‌ ಪರ ರಾಜ್ಯ ಬಿಜೆಪಿ ನಾಯಕರ ಲಾಬಿ

ಚನ್ನಪಟ್ಟಣ ಟಿಕೆಟ್‌: ಸಿ.ಪಿ. ಯೋಗೇಶ್ವರ್‌ ಪರ ರಾಜ್ಯ ಬಿಜೆಪಿ ನಾಯಕರ ಲಾಬಿ

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗಾಗಿ ಸಿ.ಪಿ. ಯೋಗೇಶ್ವರ್‌ ಪರ ದಿಲ್ಲಿಯಲ್ಲಿ ಲಾಬಿ ಆರಂಭಿಸಿರುವ ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದ ಬಿಜೆಪಿ ನಾಯಕರ ತಂಡ ಗುರುವಾರ ಬೆಳಗ್ಗೆ ಕೆಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮನೆಯಲ್ಲಿ ಸಭೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಸಭೆಯಲ್ಲಿ ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳುವ ಬಗ್ಗೆ ಪ್ರಹ್ಲಾದ್‌ ಜೋಶಿಗೆ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಿ. ಅವರು ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಫ್ರೆಂಡ್ಲಿ ಫೈಟ್‌ ಆಡೋಣ ಎಂದು ಯೋಗೇಶ್ವರ್‌ ತಿಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular