ವಯನಾಡ್: ಜುಲೈ ೩೦ರಂದು ಭೂಕುಸಿತ ಉಂಟಾದ ವಯನಾಡ್ನ ಪುಂಜಿರಿಮಟ್ಟಂ ಸಮೀಪದಲ್ಲಿಯೇ ಶನಿವಾರ ಮಣ್ಣು ಕುಸಿತ ಸಂಭವಿಸಿದೆ.
ಆ ಪ್ರದೇಶದಲ್ಲಿ ಶೋಧ ಕಾರ್ಯ ಮತ್ತು ಇತರ ಕೆಲಸಗಳಲ್ಲಿ ತೊಡಗಿರುವವರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜುಲೈ ೩೦ ರಂದು ವಯನಾಡ್ನ ಪುಂಜಿರಿಮಟ್ಟಂ, ಚೂರಲ್ಮಲ ಹಾಗೂ ಮುಂಡಕ್ಕೈನಲ್ಲಿ ಸಂಭವಿಸಿದ್ದ ದುರಂತದಲ್ಲಿ ೨೦೦ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.