ಕೆ.ಆರ್. ಕ್ಷೇತ್ರದಲ್ಲಿ ೧ಲಕ್ಷ ಸದಸ್ಯರ ಗುರಿ
ಮೈಸೂರು: ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ರವರು ಪ್ರಥಮ ಸದಸ್ಯತ್ವವನ್ನು ಪಡೆಯುವ ಮೂಲಕ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇಂದು ಮೈಸೂರಿನ ಅಗ್ರಹಾರದ ೧೦೧ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವತಿಯಿಂದ ಸದಸ್ಯತ್ವ ಅಭಿಯಾನದ ಪ್ರಚಾರ ವಾಹನವನ್ನು ಪ್ರಾರಂಭಿಸಿದ್ದು, ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ರವರು ವಾಹನಕ್ಕೆ ಹಸಿರು ನಿಶಾನೆ ತೋರಿ, ಹತ್ತಾರು ಯುವಕರಿಗೆ ಸದಸ್ಯತ್ವ ನೊಂದಣಿ ಮಾಡಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ದೇಶದಲ್ಲಿ ನಿಜವಾದ ರಾಷ್ಟ್ರೀಯ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಏಕೆಂದರೆ ದೇಶದ ಉದ್ದಗಲಕ್ಕೂ ತನ್ನ ಪ್ರಾತಿನಿಧ್ಯವನ್ನು ಹೊಂದಿದೆ. ಸದಸ್ಯತ್ವ ಅಭಿಯಾನವನ್ನು ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷ ಬಿಜೆಪಿ.
೨೦೦೦ದ ನಂತರ ಜನಿಸಿದ ಜನರೇಷನ್ – Z ಎಂದು ಕರೆಯಲ್ಪಡುವ ೧೮-೨೪ ವರ್ಷದ ಯುವಕ- ಯುವತಿಯರು ಭಾರತೀಯ ಜನತಾ ಪಕ್ಷ ಸೇರಲು ಹುಮ್ಮಸ್ಸಿನಿಂದ ಇದ್ದಾರೆ. ಇಂತಹ ಯುವ ಪೀಳಿಗೆಯ ಆಸಕ್ತರನ್ನು ಪಕ್ಷದ ಸದಸ್ಯರನ್ನಾಗಿ ಭರಮಾಡಿಕೊಳ್ಳುವತ್ತ ನಾವೆಲ್ಲಾ ಒಟ್ಟುಗೂಡಿ ಕೆಲಸ ಮಾಡಬೇಕು. ವಿದ್ಯಾರ್ಥಿ ಸಮುದಾಯ ಯುವ ಪೀಳಿಗೆ, ಮಾತ್ರವಲ್ಲದೇ ಸಮಾಜದ ಎಲ್ಲಾ ಸಮುದಾಯ-ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯರನ್ನಾಗಿಸುವ ಮೂಲಕ ಈ ಅಭಿಯಾನ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗುವಂತೆ ಕೆಲಸ ಮಾಡಬೇಕೆಂದು ಕರೆ ನೀಡಿದರು. ನಮ್ಮ ಕ್ಷೇತ್ರದಲ್ಲಿ ಪಕ್ಷವು ೧ ಲಕ್ಷ ಸದಸ್ಯರ ಗುರಿಯನ್ನ ಹೊಂದಿದೆ. ಗುರಿಯನ್ನು ಮುಟ್ಟಲು ಈ ಪ್ರಚಾರ ವಾಹನ ಪೂರಕವಾಗಿ ಕೆಲಸಮಾಡಲಿದೆ. ಇಂದಿನಿಂದ ೧ ತಿಂಗಳುಗಳ ಕಾಲ ಕ್ಷೇತ್ರಾದ್ಯಂತ ಎಲ್ಲ ಕಾಲೇಜುಗಳು, ಸರ್ಕಲ್ ಗಳು ಪ್ರಮುಖ ಜನಸಂದಣಿ ಪ್ರದೇಶಗಳಿಗೆ ಪ್ರಚಾರವಾಹನ ಸಂಚರಿಸಲಿದೆ.
ನರೇಂದ್ರ ಮೋದಿರವರ ನೇತೃತ್ವದಲ್ಲಿ ಭಾರತ ದೇಶ ಒಂದು ಪ್ರಭಲ ಶಕ್ತಿಯಾಗಿ ಬೆಳೆದು ನಿಲ್ಲುತ್ತಿದೆ. ಭಾರತವನ್ನ ವಿಶ್ವಗುರುವನ್ನಾಗಿಸುವ ದ್ಯೇಯ ಹೊಂದಿರು ಏಕೈಕ ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ. ಆದ್ದರಿಂದ ರಾಷ್ಟ್ರೀಯತೆಯ ವಿಚಾರಧಾರೆಯ ಬಿಜೆಪಿ ಪಕ್ಷದ ಸದಸ್ಯರಾಗುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ. ಸದಸ್ಯರಾಗ ಬಯಸುವವರು ೮೮೦೦೦೦೨೦೨೪ ನಂಬರ್ ಗೆ ಮಿಸ್ ಕಾಲ್ ನೀಡಬಹುದು ಅಥವ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ ಸದಸ್ಯರಾಗಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ, ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ, ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮೈ.ವಿ. ರವಿಶಂಕರ್, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ, ಜಯರಾಂ, ಜಯಶಂಕರ್, ಗಿರಿದರ್, ಸೋಮಸುಂದರ್, ಬಿಎಂ ರಘು, ಕೇಬಲ್ ಮಹೇಶ್, ಮಾಜಿ ಮಾಹಾಪೌರರಾದ ಶಿವಕುಮಾರ್, ಜೋಗಿ ಮಂಜು, ವಿಶ್ವೇಶ್ವರಯ್ಯ, ರಾಕೇಶ್ ಗೌಡ, ಬಿವಿ ಮಂಜುನಾತ್, ಸರ್ವಮಂಗಳ, ಹರೀಶ್, ನವೀನ್, ನಂದೀಶ್, ಸೌಮ್ಯ ಉಮೇಶ್, ರಮೇಶ್, ಅಕ್ಷಯ್, ಮಧು ಗೌಡ, ಹರ್ಷ, ಪ್ರತೀಕ್, ಚರಣ್, ವರುಣ್, ಶಿವಪ್ರೇರಣ್, ಶ್ರೀಕಂಠ, ರಮೇಶ್, ಶಿವಪ್ರಕಾಶ್ ಇನ್ನಿತರರು ಉಪಸ್ತಿತರಿದ್ದರು.