Saturday, April 19, 2025
Google search engine

Homeರಾಜ್ಯಸುದ್ದಿಜಾಲಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಿ-ಎಚ್.ಎಸ್.ಪಾಂಡುರಂಗ

ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಿ-ಎಚ್.ಎಸ್.ಪಾಂಡುರಂಗ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ದಿಯಾಗ ಬೇಕಾದರೇ ರೈತರು ಗುಣಮಟ್ಟದ ಹಾಲನ್ನ ಸರಬರಾಜು ಮಾಡಬೇಕೆಂದು ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಪಾಂಡುರಂಗ ಹೇಳಿದರು.

ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಸಂಘವು 3.56 ಲಕ್ಷ ರೂ ಲಾಭ ಗಳಿಸಿದೆ ಎಂದರು ರೈತರಿಗೆ ಪಾರದರ್ಶಕವಾಗಿ ಆಡಳಿತ ನೀಡಲು ಮುಂದಿನ ದಿನಗಳಲ್ಲಿ ನಿಟ್ಟಿನಲ್ಲಿ ನೂತನ ಆನ್ ಲೈನ್ ಮೂಲಕ ಪ್ರತಿದಿನ ಸರಬರಾಜು ಮಾಡುವ ಹಾಲಿನ ಪ್ರಮಾಣ ಹಣ ಹಾಗೂ ಸರ್ಕಾರದ ಪ್ರೋತ್ಸಾಹ ಧನದ ವಿವರಗಳು ಸದಸ್ಯರ ಮೊಬೈಲ್ ಸಂಖ್ಯೆಗೆ ಲಭ್ಯವಾಗಲು ಅಗತ್ಯ ಕ್ರಮ ಕೈ ಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಸಂಘದ ವಾರ್ಷಿಕ ವರದಿಯನ್ನು ಪರಿಶೀಲನೆ ನಡೆಸಿಸಿ ಸಂಘದ ಕಟ್ಟಡಕ್ಕೆ ಜಿಲ್ಲಾ ಒಕ್ಕೂಟದಿಂದ ಕಾಂಪೌಂಡ್ ಮತ್ತು ಪ್ಲಾಟ್ ಪಾರಂ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಸಂಘದ ಸದಸ್ಯರಾದ ಪ್ರಶನ್ನ, ಮಲ್ಲಿಕಾರ್ಜುನ,ರಮೇಶ್ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ಸೋನು, ರಾಕೇಶ್, ಪಲ್ಲವಿ ಅವರನ್ನು ಸನ್ಮಾನಿಸಸಲಾಯಿತು.

ಸಭೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕರಾದ, ಮ್ಯಾನೇಜರ್ ಕರಿಬಸವರಾಜು, ಮಾಜಿ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ತಾಲೂಕು ಸಹಾಯಕರಾದ ಡಾ.ಪ್ರವೀಣ್ ಪತ್ತಾರ್, ವಿಸ್ತರಾಣಾಧಿಕಾರಿ ಅಭಿಷೇಕ್
ಸಂಘದ ಉಪಾಧ್ಯಕ್ಷ ಸಿದ್ಲಿಂಗಸ್ವಾಮಿ, ಎಚ್.ಕೆ.ಶಿವಕುಮಾರ್,ಕೃಷ್ಣೇಗೌಡ,ಮಹದೇವ,ಎಚ್.ಎಸ್.ಮಹದೇವ ,ಎಚ್.ಎನ್.ರಾಜು,ಕೃಷ್ಣಶೆಟ್ಟಿ,ರಾಣಿ,ಮಂಜುಳಾ,ಮಹೇಶ್,ಶಿವಣ್ಣನಾಯಕ, ಸಂಘದ ಮಾಜಿ ಅಧ್ಯಕ್ಷರಾದ ಈಶ್ವರಪ್ಪ, ಬಸವರಾಜು, ಪುಟ್ಟರಾಜು, ರಾಮಕೃಷ್ಣ, ಸಂಘದ ಸಿಇಓ ಎಚ್.ಪಿ.ಜಲೇಂದ್ರ, ಸಿಬ್ಬಂದಿಗಳಾದ ಲವ, ಜಲೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular