Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ ಆರ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ , ಉಪಾಧ್ಯಕ್ಷರಾಗಿ ಎಚ್ ಎನ್ ಸರ್ವಮಂಗಳ...

ಕೆ ಆರ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ , ಉಪಾಧ್ಯಕ್ಷರಾಗಿ ಎಚ್ ಎನ್ ಸರ್ವಮಂಗಳ ಆಯ್ಕೆ

ಮೈಸೂರು: ನಗರದ ಪ್ರತಿಷ್ಠಿತ ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ 2024 -2029ನೇ
ಸಾಲಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಅಗ್ರಹಾರದಲ್ಲಿರುವ ಬ್ಯಾಂಕ್ ನ ಕಚೇರಿಯಲ್ಲಿ
ಸಂಘದ ರಿಟರ್ನಿಂಗ್ ಅಧಿಕಾರಿಯವರಾದ ಬಿ ರಾಜುರವರು ಚುನಾವಣೆಯ ಪ್ರಕ್ರಿಯೆ ನಡೆಸಿದ್ದು
ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ ರವರು ಅಧ್ಯಕ್ಷರಾಗಿ ಹಾಗೂ ಮಾಜಿ ನಿರ್ದೇಶಕರಾದ ಎಚ್ ಎನ್ ಸರ್ವಮಂಗಳ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬ್ಯಾಂಕ್ ನ ನಿರ್ದೇಶಕರಾದ ಹೆಚ್ ವಿ ಭಾಸ್ಕರ್, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ (ಪಾತಿ), ಜಿ ಎಂ ಪಂಚಾಕ್ಷರಿ, ಟಿ ವಿ ಗಣೇಶ್ ಮೂರ್ತಿ ತಾಯೂರು, ಹಾಗೂ ಕೆಎಂಪಿ ಕೆ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಜಿ ರಾಘವೇಂದ್ರ, ಲೋಕೇಶ್ ಕುಮಾರ್, ಶಿವಮೂರ್ತಿ, ಮಲ್ಲೇಶ್, ಮಹಾನ್ ಶ್ರೇಯಸ್, ಮಂಜಪ್ಪ, ತೀರ್ಥ ಕುಮಾರ್, ಮಂಜುನಾಥ್, ಹಾಗೂ ಬ್ಯಾಂಕ್ ಸಿಬ್ಬಂದಿಗಳು ಮತ್ತು ಸ್ನೇಹಿತರುಗಳು ಶುಭ ಕೋರಿದರು.

RELATED ARTICLES
- Advertisment -
Google search engine

Most Popular