Saturday, April 19, 2025
Google search engine

Homeರಾಜ್ಯಅಜ್ಜಂಪಿರ್ ಖಾದ್ರಿಗೆ ಬುದ್ದಿ ಮತ್ತು ಮರ್ಯಾದೆ ಇಲ್ಲ: ಯತ್ನಾಳ್

ಅಜ್ಜಂಪಿರ್ ಖಾದ್ರಿಗೆ ಬುದ್ದಿ ಮತ್ತು ಮರ್ಯಾದೆ ಇಲ್ಲ: ಯತ್ನಾಳ್

ಬೆಳಗಾವಿ: ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿಗೆ ಬುದ್ದಿ ಮತ್ತು ಮರ್ಯಾದೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಅವರು ಡಾ. ಬಿಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರೂ ಎಂಬ ಖಾದ್ರಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ಅಜ್ಜಂಪಿರ್ ಖಾದ್ರಿ, ಡಾ. ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಿಲ್ಲ. ಡಾ. ಬಿಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಎಂದೂ ಬಯಸಿಲ್ಲ. ಡಾ. ಬಿಆರ್ ಅಂಬೇಡ್ಕರ್ ಅವರು ಹಿಂದೂ ವಿರೋಧಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಮ್ಮ ಜನ ಅಂಬೇಡ್ಕರ್ ಅವರ ವಿಚಾರಧಾರೆ ಓದಿಲ್ಲ. ಅದೇ ಈ ದೇಶದ ದುರ್ದೈವ. ನಮ್ಮ ಜನರು ಬರೀ ಗಾಂಧಿ ಬೆನ್ನು ಹತ್ತಿದ್ದಾರೆ. ಗಾಂಧಿಗಿಂತ ಶ್ರೇಷ್ಠ ಮನುಷ್ಯ ಅಂಬೇಡ್ಕರ್ ಅವರು. ಗಾಂಧಿಗೆ ಮಹಾತ್ಮ, ರಾಷ್ಟ್ರಪಿತ ಅನ್ನಬೇಡಿ ಅಂತ ಅಂಬೇಡ್ಕರ್ ಅವರು ಅವಾಗಲೇ ಹೇಳಿದ್ದರು. ರಾಷ್ಟ್ರಪಿತ ಹೇಗೆ ಆಗುತ್ತಾರೆ ದೇಶಕ್ಕೆ ಗಂಡ ಇರ್ತಾನಾ? ಅಂತ ಅಂಬೇಡ್ಕರ್ ಅವರು ಹೇಳಿದ್ದರು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular