Monday, April 21, 2025
Google search engine

Homeರಾಜ್ಯಸುದ್ದಿಜಾಲಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಿ: ಡಾ. ಕುಮಾರ್

ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಿ: ಡಾ. ಕುಮಾರ್

ರಾಮನಗರ: ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಮುಖ್ಯ ಉದ್ದೇಶ ಕ್ಷಯ ಪ್ರಕರಣಗಳ ಅನ್ವೇಷಣೆಗೆ ಹೆಚ್ಚು ಅಪಾಯದ ಪ್ರದೇಶಗಳಲ್ಲಿ ಹಾಗೂ ದುರ್ಬಲ ಜನಸಂಖ್ಯೆಯ ಮನೆ ಭೇಟಿ ಸಮೀಕ್ಷೆಯ ಮೂಲಕ ವ್ಯಕ್ತಿಗತ ರೋಗಿಗಳ ತಪಾಸಣೆ ಮಾಡುವುದು, ಶಂಕಿತ ಪ್ರಕರಣಗಳ ಕಫದ ಮಾದರಿ ಸಂಗ್ರಹಿಸಿ ನಿಯೋಜಿತ ಸೂಕ್ಷö್ಮದರ್ಶಕ ಕೇಂದ್ರಗಳಿಗೆ ಕಳುಹಿಸಿವುದು. ಒಂದುವೇಳೆ ಕ್ಷಯರೋಗವೆಂದು ದೃಢಪಟ್ಟಲ್ಲಿ  ರೋಗಿಗಳಿಗೆ ಅಂದೇ ಉಚಿತವಾಗಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಇದರಿಂದ ರೋಗಿಗೆ ಸಂಪೂರ್ಣವಾಗಿ ಕ್ಷಯರೋಗವನ್ನು ಗುಣಪಡಿಸುವುದರ ಜೊತೆಗೆ ಇತರರಿಗೆ ಹರಡುವುದನ್ನು ತಪ್ಪಿಸಬಹುದು  ಆದ್ದರಿಂದ ಕ್ಷೇತ್ರ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜುಲೈ 17 ರಿಂದ ಆಗಸ್ಟ್ 02 ರ ವರೆಗೆ ಕ್ರಿಯಾ ಯೋಜನೆಯನ್ನು ಮನೆ-ಮನೆ ಸಮೀಕ್ಷೆ ಕಾರ್ಯ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರಿಗೆ  ಮಾಹಿತಿ ನೀಡುವ ಮೂಲಕ   ಕ್ಷಯ ಮುಕ್ತ ಸಮಾಜ ನಿರ್ಮಿಸಲು  ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ  ಯಶಸ್ವಿಗೊಳಿಸಲು ಸಹಕರಿಸುವಂತೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ರಾಮನಗರ ಹಾಗೂ ಬಿಡದಿ  ಸಮುದಾಯ ಅರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಬಿಡದಿ ವಿಶ್ವ ಸಾಯಿ  ಪ್ರೌಢಶಾಲೆ ಶಾಲಾ ಸಭಾಂಗಣದಲ್ಲಿ  ಸಕ್ರಿಯ ಕ್ಷಯರೋಗ ಪತ್ತೆ  ಮತ್ತು ಚಿಕಿತ್ಸಾ ಅಂದೋಲನದ ಉದ್ಗಾಟನೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಎಸ್. ಗಂಗಾಧರ್ ಅವರು ಮಾತನಾಡಿ, ಕ್ಷಯರೋಗ ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಸೂಕ್ಷಾಣುವಿಂದ ಬರುತ್ತದೆ. ಕ್ಷಯರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿAದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ., ಆದ್ದರಿಂದು ಕೆಮ್ಮುವಾಗ ಮತ್ತು ಸೀನುವಾಗ  ಕರವಸ್ತç ಬಳಸುವಂತೆ ಸಲಹೆ ನೀಡಿದರು.  2 ವಾರಕ್ಕಿಂತ  ಹೆಚ್ಚಿನ ಅವಧಿಯ ಸತತವಾದ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕ್ಷಯರೋಗದ ಮುಖ್ಯ ಲಕ್ಷಣಗಳಾಗಿದ್ದು  ಸಮೀಕ್ಷೆ ವೇಳೆ ಇಂತಹ ಲಕ್ಷಣಗಳುಳ್ಳ ವ್ಯಕ್ತಿಗಳು ಇದ್ದಲ್ಲಿ ಸಮೀಕ್ಷೆ ವೇಳೆಯಲ್ಲಿ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳು ಪೋಷಕರಿಗೆ  ತಿಳಿಸಬೇಕು. ಹಾಗೂ ಉತ್ತಮ ಆರೋಗ್ಯ ಪಡೆಯಬೇಕೆಂದರೆ ಸ್ಥಳೀಯವಾಗಿ ದೊರೆಯುವ  ಹಸಿರು ಸೊಪ್ಪು ತರಕಾರಿ , ಹಣ್ಣು,  ಇತರೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು  ಸೇವಿಸಬೇಕು ಜೊತೆಗೆ  ವೈಯಕ್ತಿಕ ಸ್ವಚ್ಚತೆ ಗೆ ಹೆಚ್ಚಿನ ಆದ್ಯತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ರಾಘವೇಂದ್ರ, ಮುಖ್ಯ ಶಿಕ್ಷಕ ಶಿವರಾಜ್ ಕುಮಾರ್, ಡಿಟಿಒ ಕಚೇರಿಯ ಮೇಲ್ವಿಚಾರಕರಾದ ಕೃಷ್ಣೇಗೌಡ ಟಿ, ಶಿವನಂಜಯ್ಯ, ವಿಶ್ವನಾಥ್, ತೇಜಸ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್ ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular