Thursday, April 17, 2025
Google search engine

Homeಅಪರಾಧಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಉದ್ಯಮಿಗೆ ₹4.5 ಲಕ್ಷ ವಂಚನೆ: ಇಬ್ಬರ ವಿರುದ್ಧ ಪ್ರಕರಣ

ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಉದ್ಯಮಿಗೆ ₹4.5 ಲಕ್ಷ ವಂಚನೆ: ಇಬ್ಬರ ವಿರುದ್ಧ ಪ್ರಕರಣ

ಬೆಂಗಳೂರು: ಉದ್ಯಮಿ ವಿ. ಮಂಜುನಾಥ್ ಅವರಿಗೆ 4.50 ಲಕ್ಷ ರೂ. ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಂಡವಾಳ ಹೂಡಿಕೆ ಮಾಡುವುದಾಗಿ ನಂಬಿಸಿ ದುಬೈ ಮೂಲದ ಸುಲ್ತಾನ್ ನಿಯಾಜ್ ಮತ್ತು ಬೆಂಗಳೂರಿನ ಅಜ್ಮಲ್ ಅಲಿಯಾಸ್ ಫೈಜಲ್ ಎಂಬಾತರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ, ಮಂಜುನಾಥ್‌ಗೆ ಫೇಸ್‌ಬುಕ್‌ ಮೂಲಕ ಸುಲ್ತಾನ್ ಪರಿಚಯವಾಗಿದ್ದ. ಬಳಿಕ ಅವರು ನಿರಂತರ ಸಂಪರ್ಕದಲ್ಲಿದ್ದು, ಕ್ರಿಪ್ಟೊ ಕರೆನ್ಸಿಗೆ ಹೂಡಿಕೆ ಮಾಡುವಂತೆ ಸಲಹೆ ನೀಡಿದ. ಅವರ ಮಾತು ನಂಬಿದ ಮಂಜುನಾಥ್ ಮತ್ತು ಅವರ ಸ್ನೇಹಿತ ಹಣ ಹೂಡಿಕೆ ಮಾಡಲು ನಿರ್ಧರಿಸಿದರು. ನಂತರ, ಹೂಡಿಕೆಗೆ ಸಿದ್ಧರಾಗಿರುವ ಮಾಹಿತಿ ನೀಡಿದಾಗ, ದುಬೈನಲ್ಲಿರುವ ತನ್ನ ಸ್ನೇಹಿತ ಅಜ್ಮಲ್‌ಗೆ ಹಣ ನೀಡುವಂತೆ ಸುಲ್ತಾನ್ ಸೂಚಿಸಿದ.

ಹೀಗಾಗಿ ಮಂಜುನಾಥ್ ಅವರು ತಮ್ಮ ಸ್ನೇಹಿತರು ಸುನಿಲ್ ಹಾಗೂ ಸತೀಶ್ ಜೊತೆಗೂಡಿ, ಬೆಂಗಳೂರಿನ ಕಾಫಿ ಡೇ ವಾಹನ ನಿಲುಗಡೆ ಪ್ರದೇಶದಲ್ಲಿ 4.50 ಲಕ್ಷ ರೂ. ಹಣವನ್ನು ಅಜ್ಮಲ್‌ಗೆ ನೀಡಿದ್ದಾರೆ. ಆದರೆ ಆ ಬಳಿಕ ಇಬ್ಬರೂ ಆರೋಪಿಗಳೂ ಸಂಪರ್ಕವಿಲ್ಲದೇ ನಾಪತ್ತೆಯಾಗಿದ್ದಾರೆ. ಅಜ್ಮಲ್‌ನ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಯಾವುದೇ ಪತ್ತೆಯಾಗಿಲ್ಲ.

ಈ ಕುರಿತು ಮಂಜುನಾಥ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

RELATED ARTICLES
- Advertisment -
Google search engine

Most Popular