Tuesday, June 17, 2025
Google search engine

Homeರಾಜ್ಯಸುದ್ದಿಜಾಲಭಾರತದಲ್ಲಿ ಹಿಂದು ಧರ್ಮ ಜಾಗೃತಿ ಮಾಡುವುದು ಅನಿವಾರ್ಯವಾಗಿದೆ: ಪ್ರತಾಪ್ ಸಿಂಹ

ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಮಾಡುವುದು ಅನಿವಾರ್ಯವಾಗಿದೆ: ಪ್ರತಾಪ್ ಸಿಂಹ

ಡಾ.ಪೃಥು ಪಿ ಅದ್ವೈತ್ ನ ಉಪನಯನ ಕಾರ್ಯಕ್ರಮದಲ್ಲಿ ಧರ್ಮ ಜಾಗೃತಿ

ಮೈಸೂರು: ಮೈಸೂರಿನ ಶ್ರೀರಾಂಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಡಾ. ಪೃಥು ಪಿ ಅದ್ವೈತ್ ಉಪನಯನದ ಕಾರ್ಯಕ್ರಮದಲ್ಲಿ ಧರ್ಮ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಭಾಗಿಯಾದ ಮಾಜಿ ಸಂಸದ ಪ್ರತಾಪ ಸಿಂಹ ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಮಾಡುವುದು ಅನಿವಾರ್ಯವಾಗಿದೆ ಇಂತಹ ಸಂದರ್ಭದಲ್ಲಿ ಮೈಸೂರು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಸ್ತೋತ್ರ ಪಠಣದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಎಂಟು ವರ್ಷದ ಬಾಲಕ ಪೃಥು ಪಿ ಅದ್ವೈತ್ ಉಪನಯನ ಧರ್ಮ ಜಾಗೃತಿಯ ವೇದಿಕೆಯಾಗಿ ಪರಿಣಮಿಸಿರುವುದು ಸಂತೋಷದ ವಿಷಯ.‌ ಶೃಂಗೇರಿ ಸ್ವಾಮಿಗಳು, ಪೇಜಾವರ ಶ್ರೀ ಗಳು. ಮಂತ್ರಾಲಯ ಶ್ರೀಗಳು, ಉತ್ತರಾದಿ ಮಠದ ಶ್ರೀಗಳು, ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿಗಳು ಸೇರಿದಂತೆ ಹಲವಾರು ಮಠಗಳಿಂದ ಆಶೀರ್ವಾದ ಮಾಡಿ ಹಾರೈಸಿ ಪೃಥುವಿನ ಉಪನಯನಕ್ಕೆ ಅನುಗ್ರಹಿಸಿರವುದನ್ನು ನೋಡಿದರೆ ಮುಂದೆ ಪೃಥುವಿನಿಂದ ಸನಾತನ ಧರ್ಮದ ಕಾರ್ಯಗಳನ್ನು ಮಾಡುವ ಜವಾಬ್ದಾರಿ ಎಷ್ಟಿದೆ ಎಂದು ತಿಳಿಯುತ್ತದೆ. ಮನುಷ್ಯ ತನಗಿರುವ ಷೋಡಷ ಸಂಸ್ಕಾರಗಳಿಂದ ವಿಮುಖನಾಗುತ್ತಿರುವ ಈ ಕಾಲಘಟ್ಟದಲ್ಲಿ ಅದರ ಮಹತ್ವವನ್ನು ಮತ್ತೆ ತಿಳಿಸುವುದು ಹಾಗೂ ಆಚರಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ನಮ್ಮೆಲ್ಲರಲ್ಲಿ ಧರ್ಮ ಜಾಗೃತಿಯಾದಾಗ ಮಾತ್ರ ಧರ್ಮಬಲಗೊಳುತ್ತದೆ ಯುವಕರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಬೇಕು ಎಂದು ತಿಳಿಸಿದರು.

ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಪೃಥು ಪಿ ಅದ್ವೈತ್ ಉಪನಯನದಲ್ಲಿ ವಿಶೇಷವಾಗಿ ಧರ್ಮ ಜಾಗೃತಿ ಮೂಡಿಸುವ ಫಲಕಗಳು, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಮಾತೃ ದೇವೋ ಭವ, ಪಿತೃ ದೇವೋ ಭವ ಎಂಬ ವೇದದ ಸಂದೇಶದ ಫಲಕಗಳು,ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಿ ಸಂವತ್ಸರ ಕಳೆದ ಕಾಲಘಟ್ಟದಲ್ಲಿ ಅದರ ಹೋರಾಟ ಮರೆಯಬಾರದು ಎಂದು ಅಯೋಧ್ಯೆ ಶ್ರೀರಾಮನ ಫೋಟೋ ನೀಡುವುದು ಹಾಗೂ ಧಾರ್ಮಿಕ ಆಚರಣೆಗಳನ್ನು ಮಾಡುವ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಿಶೇಷವಾಗಿ ಧರ್ಮ ಜಾಗೃತಿ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಪೃಥು ಪಿ ಅದ್ವೈತ್ ನ ಪೋಷಕರಾದ ಪುನೀತ್ ಜಿ ಕೂಡ್ಲೂರು, ಪೂಜಾ ಎನ್, ಕೆ.ಆರ್ ಗಣೇಶ್, ಸರಸ್ವತಿ , ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಿಶಾಂತ್ ಸೇರಿದಂತೆ ಕುಟುಂಬದ ಬಂಧು ಮಿತ್ರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular