ದಾವಣಗೆರೆ: ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 25 ವರ್ಷದ ಯುವಕನೊಬ್ಬ ತನ್ನ 55 ವರ್ಷದ ಅತ್ತೆಯೊಂದಿಗೆ (ಮಲತಾಯಿ) ಅಕ್ರಮ ಸಂಬಂಧ ಬೆಳೆಸಿಕೊಂಡು, ತನ್ನ ಪತ್ನಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಆಕೆಯ ಜೊತೆಗೆ ಪರಾರಿಯಾಗಿರುವ ಘಟನೆ ಬಹಿರಂಗವಾಗಿದೆ.
ಚೆನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ನಿವಾಸಿ ಗಣೇಶ್ ಎಂಬ ಯುವಕ, ಈತನ ಪತ್ನಿ ಹೇಮಾ, ಮುದ್ದೇನಹಳ್ಳಿಯ ಶಾಂತಾ ಎಂಬ ಮಹಿಳೆಯ ಮಗಳು. ಶಾಂತಾ ಹೇಮಾಳ ಮಲತಾಯಿ ಆಗಿದ್ದು, ಹೇಮಾ ತಂದೆ ನಾಗರಾಜ್ ಅವರ ಎರಡನೇ ಪತ್ನಿ.
ಮೇ 12ರಂದು, ಗಣೇಶ್ ತನ್ನ ಪತ್ನಿ ಹೇಮಾಳೊಂದಿಗೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಹೋಗಿದ್ದ. ಆದರೆ ಅಲ್ಲಿ ಪತ್ನಿಯನ್ನು ಬಿಟ್ಟು ಮಲತಾಯಿ ಶಾಂತಾ ಜೊತೆಗೆ ಪರಾರಿಯಾಗಿದ್ದಾನೆ. ಬಳಿಕ, ಪತ್ನಿ ಮತ್ತು ಕುಟುಂಬಸ್ಥರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಮತ್ತು ದೂರು ನೀಡಿದ್ದು, ಈಗ ಈ ಪ್ರಕರಣ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ, ಶಾಂತಾ ಮತ್ತು ಗಣೇಶ್ ನಡುವೆ ಕೆಲವು ತಿಂಗಳಿನಿಂದಲೇ ಅಕ್ರಮ ಸಂಬಂಧವಿದ್ದದಾಗಿ ತಿಳಿದು ಬಂದಿದೆ. ಈ ಸಂಬಂಧವನ್ನು ಕುಟುಂಬದವರು ಹಿಂದೆ ಕೇಳಿದ್ದರೂ, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಅವರು ಪರಾರಿಯಾದ ಹಿನ್ನೆಲೆಯಲ್ಲಿ ವಿಷಯ ಗಂಭೀರ ಆಯಾಮ ಪಡೆದುಕೊಂಡಿದೆ.