Friday, July 4, 2025
Google search engine

Homeಅಪರಾಧಹಾಸನದಲ್ಲಿ ಹೃದಯಾಘಾತದ ಮತ್ತೊಂದು ಸಾವು: ಗ್ರಾ.ಪಂ ಸದಸ್ಯ ಸಂತೋಷ್ ಕಾರಗೋಡು ನಿಧನ

ಹಾಸನದಲ್ಲಿ ಹೃದಯಾಘಾತದ ಮತ್ತೊಂದು ಸಾವು: ಗ್ರಾ.ಪಂ ಸದಸ್ಯ ಸಂತೋಷ್ ಕಾರಗೋಡು ನಿಧನ

ಹಾಸನ : ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಒಬ್ಬರಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಸನದಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ ಮುಂದುವರೆದಿದ್ದು, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕಾರಗೋಡು (41) ಎನ್ನುವವರು ಸಾವನ್ನಪ್ಪಿದ್ದಾರೆ. ಆಲೂರು ತಾಲೂಕಿನ ಕಲ್ಲಾರಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರಾತ್ರಿ ಮಲಗಿದ್ದಲ್ಲಿಯೇ ಸಂತೋಷಕ್ಕೆ ಹೃದಯಘಾತ ಸಂಭವಿಸಿದೆ. ಬೆಳಿಗ್ಗೆ ಸಂತೋಷ ನಾನು ಎಬ್ಬಿಸಲು ಹೋಗಿದ್ದಾಗ ಕುಟುಂಬಸ್ಥರಿಗೆ ಈ ಕುರಿತು ತಿಳಿದಿದೆ ಕೂಡಲೇ ಅವರು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ ಅಷ್ಟರಲ್ಲೇ ಸಂತೋಷ ಸಾವನಪ್ಪಿದ್ದಾರೆ ಹಿಂದೆ ಹೃದಯಘಾತ ಉಂಟಾಗಿ ಸಂತೋಷ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular