Saturday, April 19, 2025
Google search engine

Homeಅಪರಾಧಮಂಡ್ಯದಲ್ಲಿ ಚೆನ್ನಕೇಶವ ದೇಗುಲದ ಗೇಟ್ ಬಿದ್ದು 5 ವರ್ಷದ ಮಗು ಸಾವು

ಮಂಡ್ಯದಲ್ಲಿ ಚೆನ್ನಕೇಶವ ದೇಗುಲದ ಗೇಟ್ ಬಿದ್ದು 5 ವರ್ಷದ ಮಗು ಸಾವು

ಮಂಡ್ಯ : ದೇಗುಲದ ಗೇಟ್ ಬಿದ್ದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹುಂಜನಕೆರೆ ಗ್ರಾಮದ ಚೆನ್ನಕೇಶವ ದೇಗುಲದಲ್ಲಿ ಈ ಒಂದು ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.

ನಿನ್ನೆ ಕುಟುಂಬಸ್ಥರ ಜೊತೆಗೆ ಬಾಲಕ HS ಜಿಷ್ಣು (5) ದೇವಸ್ಥಾನಕ್ಕೆ ಬಂದಿದ್ದ. ಗ್ರಾಮದ ಚೆನ್ನಕೇಶವ ದೇಗುಲಕ್ಕೆ ಎಚ್ ಎಸ್ ಜಿಷ್ಣು ತೆರಳಿದ್ದ. ಈ ವೇಳೆ ದೇಗುಲದ ಗೇಟ್ ಬಿದ್ದು ಬಾಲಕ ಗಾಯಗೊಂಡಿದ್ದ. ಕೂಡಲೇ ಬಾಲಕನ ಪೋಷಕರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದಾರೆ.

ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಜಿಷ್ಣು ಕೊನೆಯಯುಸಿರೆಳಿದಿದ್ದಾನೆ. ಘಟನೆ ಕುರಿತಂತೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಜರಾಯಿ ಇಲಾಖೆ ವಿರುದ್ಧ ಪೋಷಕರು ಇದೀಗ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES
- Advertisment -
Google search engine

Most Popular