Saturday, April 19, 2025
Google search engine

Homeರಾಜ್ಯಸುದ್ದಿಜಾಲಬಾಗಲಕೋಟೆಯಲ್ಲಿ ಗಮನ ಸೆಳೆದ ಬೃಹತ್ ತಿರಂಗಯಾತ್ರೆ

ಬಾಗಲಕೋಟೆಯಲ್ಲಿ ಗಮನ ಸೆಳೆದ ಬೃಹತ್ ತಿರಂಗಯಾತ್ರೆ

ಬಾಗಲಕೋಟೆ : 77ನೇಯ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಬೃಹತ್ ತಿರಂಗಯಾತ್ರೆ ಕಣ್ಮನ ಸೆಳೆಯಿತು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ತಿರಂಗಯಾತ್ರೆಗೆ ಮಾಜಿ ಶಾಸಕ ವಿ.ಸಿ. ಚರಂತಿಮಠ ಚಾಲನೆ ನೀಡಿದರು.

ಎಂಜನಿಯರಿಂಗ ಕಾಲೇಜ ಸರ್ಕಲ್ ದಿಂದ ಪ್ರಾರಂಭಗೊಂಡು ವಿದ್ಯಾಗಿರಿಯ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಪುನಃ ಎಂಜನಿಯರಿಂಗ್ ಕಾಲೇಜ ಸರ್ಕಲ್ ನಲ್ಲಿ ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಂಡಿತು.

ಸಾವಿರ ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ ವಿದ್ಯಾಗಿರಿಯ ವಿವಿಧ ರಸ್ತೆಗಳಲ್ಲಿ ಸಾಗಿತು.ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ರಾಷ್ಟ್ರಧ್ವಜ ಹಿಡಿದು‌ ಭಾಗವಹಿಸಿದ್ದರು. ತಿರಂಗಾಯಾತ್ರೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಎನ್.ಪಾಟೀಲ, ರಾಜು ನಾಯ್ಕರ, ರಾಜು ರೇವಣಕರ, ಬಸವರಾಜ ಯಂಕಂಚಿ,ರಾಜಕುಮಾರ ಸಗಾಯಿ, ಭುವನೇಶ ಪೂಜಾರಿ, ಎಸ್.ಬಿ. ಬನ್ನೂರ, ಬಸವರಾಜ ಖೋತ, ಶೋಭಾ ರಾವ್, ಉಮೇಶ ಹಂಚಿನಾಳ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular