Friday, April 11, 2025
Google search engine

Homeರಾಜ್ಯಸುದ್ದಿಜಾಲಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು: ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ

ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು: ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ

ಚಿತ್ರದುರ್ಗ: ಒಬ್ಬಂಟಿಯಾಗಿ ಜೀವಿಸುತ್ತಿದ್ದ ಶಾಸ್ತ್ರಿ ಸಾವನ್ನಪ್ಪಿದ್ದು, ಅವರ ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆಯಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

ಗಂಗಾಧರ ಶಾಸ್ತ್ರಿ(70) ಎಂಬ ಅರ್ಚಕರು ವಾರದ ಹಿಂದೆ ಸಾವನ್ನಪ್ಪಿದ್ದರು.  ಗಂಗಾಧರ ಶಾಸ್ತ್ರಿ ಒಂಟಿಯಾಗಿ ಬದುಕು ಸವೆಸಿದ್ದರು. ಶಾಸ್ತ್ರಿಗಳು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಅವರ ಸಾವಿನ ಬಳಿಕ ಮನೆಯ ವಿವಿಧೆಡೆ ಇರಿಸಿದ್ದ 30 ಲಕ್ಷ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ.

ಗಂಗಾಧರ ಶಾಸ್ತ್ರಿ 16 ಎಕರೆ‌ ಜಮೀನಿದ್ದು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ ಸುಮಾರು 50 ಸಾವಿರ ರೂಪಾಯಿಗಿಂತ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣವೂ ಪತ್ತೆಯಾಗಿದೆ. 2 ದಿನಗಳ ಹಿಂದೆ ಭಕ್ತರು ಶಾಸ್ತ್ರಿಗಳ ಮನೆಯನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಶಾಸ್ತ್ರಿಗಳ ಮನೆಯಲ್ಲಿ ಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಶಾಸ್ತ್ರಿಗಳಿಗೆ ಯಾರೂ ವಾರಸುದಾರರು ಇಲ್ಲದೆ ಹಿನ್ನೆಲೆಯಲ್ಲಿ ಜುಲೈ 7ಕ್ಕೆ ಭಕ್ತರ ಸಭೆ ಕರೆದು, ಸಮಿತಿ ರಚನೆಗೆ ಸ್ಥಳೀಯರು ನಿರ್ಧಾರ ಮಾಡಿದ್ದಾರೆ. ಗಂಗಾಧರ ಶಾಸ್ತ್ರಿಗಳಿಗೆ ಅವರದೇ ಜಮೀನಿನಲ್ಲಿ ಗದ್ದುಗೆ ನಿರ್ಮಿಸಲು ಸಹ ಸ್ಥಳೀಯರು  ತೀರ್ಮಾನಿಸಿದ್ದಾರೆ.

RELATED ARTICLES
- Advertisment -
Google search engine

Most Popular