Friday, April 18, 2025
Google search engine

Homeಅಪರಾಧಕೇರ್ಗಳ್ಳಿಯಲ್ಲಿ ವ್ಯಕ್ತಿಯ ಕತ್ತು ಕೊಯ್ದು ಕೊಲೆ

ಕೇರ್ಗಳ್ಳಿಯಲ್ಲಿ ವ್ಯಕ್ತಿಯ ಕತ್ತು ಕೊಯ್ದು ಕೊಲೆ

ಜಯಪುರ: ಜಯಪುರ ಹೋಬಳಿಯ ಕೇರ್ಗಳ್ಳಿಯ ಬಾರ್ ಮುಂದಿರುವ ಮಾವೀನ ತೋಟದ ಬಳಿ ವ್ಯಕ್ತಿಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಕೇರ್ಗಳ್ಳಿ ನಿವಾಸಿ ಮಹದೇವ (53) ಕೊಲೆಯಾದ ವ್ಯಕ್ತಿ.

ಶವ ಕಂಡ ಸ್ಥಳೀಯರು ಜಯಪುರ ಪೊಲೀಸರಿಗೆ ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳ ಪರಿಶೀಲಿಸಿ ಮಹಜರು ನಡೆಸಲಾಗಿದೆ. ಶವ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಸಲಾಗಿದೆ. ಕುಟುಂಬದವರು ಯಾರ ಮೇಲು ವೈಮನಸ್ಸಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮೃತರಿಗೆ ಪತ್ನಿ ಮತ್ತು ಒರ್ವ ಪುತ್ರನಿದ್ದಾನೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಕೈಗೊಂಡಿದ್ದು ಕೊಲೆ ಮಾಡಿರುವವರ ಪತ್ತೆ ಹಚ್ಚಲಾಗುವುದು ಎಂದು ಜಯಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್, ಡಿವೈಎಸ್‌ಪಿ ಡಾ.ಸುಮೀತ್, ಸರ್ಕಲ್ ಇನ್‌ ಸ್ಪೆಕ್ಟರ್ ಸ್ವರ್ಣಾ, ಜಯಪುರ ಠಾಣಾ ಪಿಎಸ್ ಐ ಸುರೇಶ್ ಬೋಪಣ್ಣ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES
- Advertisment -
Google search engine

Most Popular